Friday, September 13, 2019

My ankle surgery- part 1

It was a weekend Saturday Almost End of Financial Year/Last Working day for India.
Everyone who is living in Bangalore, their dream is to live in their own home. Like that only almost a year ago I bought a 3BHK flat in an APT on the outskirts of South Bangalore in Doddakallasandra. You thought I bought this in Full Cash... no no no it’s not possible as I am also a middle class employee in the so called/famous IT industry.
There is a saying for this if you throw a stone in Bangalore it will hit an IT employee instead of street dog.
Similarly if you close a pot hole on the road now, another will also open at the same time. Why pot hole... you will come to know later.
On March 30 2019, I fell down from my scooter which caused my Left Leg Ankle Injury.
I bought the Flat in 80% Home Loan from PNB housing Finance form BTM Layout Bangalore and don’t ask about how I adjusted another 20% + Registration charges + Interiors + Pooja Room construction and finally house warming ceremony. Loan Interest rates was fixed for first year @ 8.35 % which was nominal to me but recently they (bank people) sent a notification about change of interest rate from coming year. To discuss about that, I wanted to go to bank from long time (Around 1 month) but today the time came. AS usual my wife who is also an employee working as Assistant Prof in an Engg College left to her duty by 8.30 Am. There is a Gym in our Apt, I do start the work-out after moving here (around 6 months ago), and I did that for 45-60 minutes (little more time as it’s a weekend). After that took bath, small Pooja like I do every day (for 10-20 mins) and started to bank. As we know the traffic is horrible, because of multiple issues like Metro Construction, Gas Pipelining work, BESCOM work , BWSSB work, car/bus breakdown many more.. Can’t list here.
I finally reached the bank by 12.30, evnthough I left @ 11.20 for just 8 KMs journey in my scooter. I could have went in car so that Injury/Surgery should have been avoided... even this blog too. No parking place to park the vehicles, as bank is located in 100 Ft main road. So I went inside the BTM layout to park my vehicle, and came back to bank. Had a discussion with them (bank officials) on interest rate change. It was End of week/mon and year as well. So good amount of people were there in bank still they attended to me and cleared my doubts.
Time to head back to home, as by 2.30 my wife will also come back. So went to parking place and left back to home. On the way sipped tender coconut @35 Rs and sugarcane juice @ 20 rs as well I was nearing home, a km away from home, my BIL called me and invited for lunch to their home, who stays nearby as well. I’m about to enter the main/cross road which connects to home from KP main road, an unexpected thing will happen.i.e. I fell down from scooter.
Because of metro construction, there is a diversion near my home, and I have to take roundabout in KP Main road and a hairpin kind of curve to hit my home main road. It is a narrow road. One way with only one 4 Wheeler can go on that road at a time. And also slope road from KP main road. Its entrance has BIG Tree on one side and a car showroom on the other side. Road widening should happen means; they have to cut the tree which is not a good idea. In some way this tree also helped me to reduce the risk and a tender coconut shop owner below it also helped me in getting up from the vehicle.
Why/How I fell down? When I was entering inside the road, a 4 wheeler came opposite to me, so I stopped the scooter, to get balance as everyone does; I also kept my leg down to the road. For my bad luck, the road has 2-3 feet pothole (not sure why n who digged it), and my leg went inside that, and I can’t balance the vehicle, I fell down and my leg twisted. Nearby people that tender coconut shop wala and his customers helped me to get up from the place, and they parked my vehicle aside. They offered me water, so that I can recover. And also helped me to get up from the place. I wore helmet and sun glasses, still no damages to them nor to me and to vehicle as well. No injuries at all to me on the outside, not even 1 drop of blood came with the fall.
This narrow road connects to CITI Engg College/Gokulam Apts. Many times I requested BBMP through app (BBMP SAHAAYA) to put the road. They closed the ticket mentioning long term solution. Does Long Term mean another state/central/corporation election?

Saturday, March 17, 2012

IT Lifuuu..Ishtene...


Tuesday, January 24, 2012

Melodious Song - Sidlingu

ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ?
ಹರುಷವಾ ತಂದಿಡುವೇ... ವ್ಯಸನವಾ ಬೆಂಬಿಡುವೇ...
ಬಂದರೂ ಅಳುವೂ ನಗಿಸೀ ನಲಿವಾ.... ಮ... ನ... ವೇ...

ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?

ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ...?
ನಾನು ನನ್ನದೆನ್ನುವಾ ನಿನ್ನಯಾ ತರ್ಕವೇ ಬಾಲಿಶಾ...
ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ...
ಕಲ್ಮಶಾ ನಿಶ್ಕಲ್ಮಶಾ ಥರ ಥರಾ ನಿನ್ನ ವೇಷ...
ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ...
ಇದ್ದರೂ ಜೊತೆಗೆ ದೂರಾ ಇರುವಾ ಮ..ನ..ವೇ
 
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತ ರ ವೇ...?

ಬೇಕು ಬೇಡ ಎನ್ನುವಾ ಗೊಂದಲ ಸೃಷ್ಟಿಸೋ ಮಾಯೆ ನೀ....
ತಪ್ಪು ವಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ....
ಕಲ್ಪನೆ ಪರಿಕಲ್ಪನೇ ವಿಧ ವಿಧಾ ನಿನ್ನ ತಾಣಾ...
ಬಣ್ಣನೇ ಬದಲಾವಣೆ ಎಲ್ಲಾ ನಿನ್ನಾ ಹೊಣೇ...
ಕಂಡರೂ ಸಾವೂ... ಬದುಕೂ... ಎನುವಾ ಮ..ನ..ವೇ...

ಎಲ್ಲೆಲ್ಲೊ ಓಡುವ ಮನಸೇ...ಹಾಂ... ಹಾ... ಲಾ...ಲಾ...ಲ...

Thursday, October 20, 2011

ಅಂತು ಇಂತೂ ಹೊರಟಿತು ನಮ್ಮ ಬೆಂಗಳೂರು ಮೆಟ್ರೋ

ಬೆಂಗಳೂರಿಗರ ಬಹು ನಿರೀಕ್ಷಿತ ಕನಸಿನ ಕೂಸು ಮೆಟ್ರೋ ರೈಲಿನ ಮೊದಲನೇ ಹಂತ, ಅಂತೂ ಇಂದು 20  ಅಕ್ಟೋಬರ್ 2011 ರಂದು 11  ಗಂಟೆಗೆ ಉಧ್ಘಾಟನೆ ಆಗಿದೆ. ಮಹಾತ್ಮಾ ಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ವರೆಗೆ  ಈ ಮೆಟ್ರೋ ರೈಲು ಸಂಚರಿಸಲಿದೆ.ಸಂಪೂರ್ಣ ಹವಾ ನಿಯಂತ್ರಿತವಾಗಿರುವ ನಮ್ಮ ಮೆಟ್ರೋ ರೈಲು ಒಂದುಬಾರಿಗೆ ಒಂದು ಸಾವಿರ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ರೈಲು ಬೋಗಿಯ ಒಳಗಿನ ಎರಡೂ ಬದಿಗಳಲ್ಲಿ ಸಿಸಿಟಿವಿ ಹಾಗೂ ಸೀಟಿನ ವ್ಯವಸ್ಥೆ ಮಾಡಲಾಗಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.
 ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಸೇವೆ ಕೂಡ ಇದಾಗಿದೆ.

5  ರೈಲು ನಿಲ್ದಾಣಗಳು:
  1. ಎಂ.ಜಿ.ರಸ್ತೆ,
  2. ಟ್ರಿನಿಟಿ ರಸ್ತೆ
  3. ಇಂದಿರಾನಗರ
  4. ಸ್ವಾಮಿ ವಿವೇಕಾನಂದ ನಗರ
  5. ಬೈಯಪ್ಪನ ಹಳ್ಳಿ

ಮೆಟ್ರೋ ರೈಲು ತಲುಪುವ ಸಮಯದ ವಿವರ :
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ : 1 ನಿಮಿಷ 30 ಸೆಕೆಂಡ್‌
ಟ್ರಿನಿಟಿ- ಹಲಸೂರು ರಸ್ತೆ : 1 ನಿಮಿಷ 33 ಸೆಕೆಂಡ್‌
ಹಲಸೂರು - ಇಂದಿರಾನಗರ : 1 ನಿಮಿಷ 45 ಸೆಕೆಂಡ್‌
ಇಂದಿರಾ ನಗರ- ಸ್ವಾಮಿ ವಿವೇಕಾನಂದ ನಗರ : 1 ನಿಮಿಷ 55 ಸೆಕೆಂಡ್‌
ಸ್ವಾಮಿ ವಿವೇಕಾನಂದ ನಗರ - ಬೈಯಪ್ಪನ ಹಳ್ಳಿ: 2 ನಿಮಿಷ

 
ಮೆಟ್ರೋ ರೈಲು ಪ್ರಯಾಣದರ
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ 10 ರೂ.
ಎಂ.ಜಿ ರಸ್ತೆ - ಹಲಸೂರು 12 ರೂ.
ಎಂ.ಜಿ.ರಸ್ತೆ -ಇಂದಿರಾ ನಗರ 12 ರೂ.
ಎಂ.ಜಿ.ರಸ್ತೆ - ಸ್ವಾಮಿ ವಿವೇಕಾನಂದ ನಿಲ್ದಾಣ 14 ರೂ.
ಎಂ.ಜಿ. ರಸ್ತೆ - ಬೈಯಪ್ಪನ ಹಳ್ಳಿ 15 ರೂ.

ಇನ್ನಷ್ಟು  ಸುದ್ದಿಗಳು:
http://kannada.oneindia.in/news/2011/10/18/priyanka-bmrcl-metro-driver-kaggalipura-farmer-daughter-aid0039.html
http://kannada.oneindia.in/news/2011/10/17/namma-metro-bmrcl-sanchar-saral-ಸರಾg-cards-aid0039.ಹ್ತ್ಮ್ಲ್
http://kannada.oneindia.in/news/2011/10/13/bmrcl-namma-metro-inauguration-security-arrangements-aid0039.html

Friday, September 9, 2011

Steve Jobs Apple;s unleashed..

  Macintosh of 1984
Powerbook 1991
PowerMac 1997
Power Book 1998
iBook 1999
iMac 1998
Power Mac G4 Cube 2000
i Mac 2000
i Phone/ i  Pod Touch 1997
Macbook Air

Friday, September 2, 2011

ನೀವು ನೋಡದೆ ಇರೋ ಚಿತ್ರ- ವಿಚಿತ್ರ ಕಟ್ಟಡಗಳು

 
 
 
 
 
 
 
 
 
 
 
 
Some more can be found at: http://unusual-architecture.com/

Tuesday, August 23, 2011

ಅಮೇರಿಕಾ ಪ್ರವಾಸ -- ಮತ್ತೊಮ್ಮೆ

ಮತ್ತೊಮ್ಮೆ ಮಗದೊಮ್ಮೆ ಅಮೆರಿಕಾಕ್ಕೆ ಪ್ರಯಾಣ ಬೆಳೆಸುವ ಅವಕಾಶ ನನಗೆ ಒದಗಿ ಬಂದಿದೆ. ಬಾರಿ ಷಿಕಾಗೋ(Chicago) ನಗರಕ್ಕೆ ಪ್ರಯಾಣ ಬೆಳೆಸಿದ್ದೇನೆ. ಇದರ ಸವಿವರ, ಸಪೂರವಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಬಾರಿಯ ಪಯಣ ಬೆಂಗಳೂರು - ದುಬೈ - ಪ್ಯಾರಿಸ್ - ಷಿಕಾಗೋ ಮಾರ್ಗವಾಗಿ. ಕಿಂಗ್ ಫಿಷರ್ - ಏರ್ ಫ್ರಾನ್ಸ್ ವಿಮಾನಗಳಲ್ಲಿ ಪಯಣ ಅಷ್ಟೇನೂ ಸುಖಕರವಾಗಿರಲಿಲ್ಲ. ಜೊತೆಗೆ ಪಯಣದ ಸಮಯ ಕೂಡ ಜಾಸ್ತಿ, ಸುಮಾರು ೨೮ ಗಂಟೆಗಳು . ಷಿಕಾಗೋ ದಲ್ಲಿ ಬಂದೊಡನೆ ಅಮೆರಿಕ ವಲಸೆ ಅಧಿಕಾರಿಗಳ ಬಳಿ ಹೋದೆನು. ಇವರು ನನಗೆ ಅಮೇರಿಕಾದಲ್ಲಿ ಉಳಿದುಕೊಳ್ಳಲು ಮೊದ ಮೊದಲು ನಿರಾಕರಿಸಿದರು, ನಂತರ ಒಂದು ತಿಂಗಳ ಮಟ್ಟಿಗೆ ಉಳಿದು ಕೊಳ್ಳಲು ಅವಕಾಶ ಕೊಟ್ಟರು. ಇದಕ್ಕೆ ಕಾರಣ ನನ್ನ H1B ವೀಸಾ ಮುಗಿಯುವ ಅವಧಿ ಬಹಳ ಹತ್ತಿರ, ಕೇವಲ ಒಂದು ತಿಂಗಳು ಮಾತ್ರ ಉಳಿದಿತ್ತು. ಹೇಗೋ ಅವರ ಬಳಿ ಸ್ವಲ್ಪ ಹೊತ್ತು ಮಾತು ಕಥೆ ನಡೆಸಿ, ಅಮೇರಿಕಾದಲ್ಲಿ ಉಳಿದುಕೊಳ್ಳಲು ಮತ್ತೊಂದು ಅವಕಾಶ ಪಡೆದೆನು. ಇಲ್ಲಿ ನನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳುವುದು ಎಂದು ತೀರ್ಮಾನಿಸಿದ್ದೆನು.ಅವನ ದೂರವಾಣಿ ಸಂಖ್ಯೆ ನನ್ನ ಬಳಿ ಇತ್ತು. ಅವನಿಗೆ ಕರೆ ಮಾಡಲು ವಿಮಾನ ನಿಲ್ದಾಣದಲ್ಲೇ ಇದ್ದ ಸಾರ್ವಜನಿಕ ದೂರವಾಣಿಯನ್ನು ಉಪಯೋಗ ಮಾಡಿಕೊಂಡೆನು. ಇಲ್ಲೂ ಕೂಡ ದೂರವಾಣಿ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದಕ್ಕಾಗಿ ಒಂದು ಡಾಲರ್ ವ್ಯರ್ಥವಾಯಿತು. ಹೇಗೋ ಕೊನೆಗೂ ಕರೆ ಮಾಡಿ ಸಂಜೆಗೆ ಮನೆಗೆ ಬರುತ್ತೇನೆ ಎಂದು ತಿಳಿಸಿದೆನು. ಏಕೆಂದರೆ, ಅವನು ಕೂಡ ಕೆಲಸ ಮುಗಿಸಿ ಬರುವ ಸಮಯಕ್ಕೆ ಸಂಜೆ ಆಗುವುದು ಎಂದು ತಿಳಿದಿತ್ತು. ಈಗ ಇನ್ನು ಮದ್ಯಾನ್ಹ ವಾದ್ದರಿಂದ ಅಂತರ್ಜಾಲ ದ ಬಳಕೆ ಮಾಡಿ ಕೆಲವರಿಗೆ ಇ-ಮೇಲ್ ಮಾಡಿದೆ. ಹಾಗು ಕೆಲವರಿಗೆ ಗೂಗಲ್ ಬಳಕೆ ಮಾಡಿ ಕರೆ ಕೂಡ ಮಾಡಿದೆ. ಗೂಗಲ್ ನ ಉಪಯೋಗ ಅಮೇರಿಕಾದಲ್ಲಿ ಬಹಳವಾಗಿದೆ ಇದು ಒಂದು ಉದಾಹರಣೆ ಅಷ್ಟೇ. ಇದೆ ಸಮಯದಲ್ಲಿ ಇಲ್ಲಿ ಕೆಲವು ಹುಡುಗರು ಭಾರತದಿಂದ M.S.in CS & E ಮಾಡಲು ಬಂದಿಳಿದಿದ್ದರು. ಇವರಿಗೆ ನನ್ನ ಬಳಿ ಇದ್ದ ಚಿಲ್ಲರೆ ಹಣವನ್ನು ಉಪಯೋಗಿಸಿ ಅವರ ಸ್ನೇಹಿತರು ಮತ್ತು ಬಂಧು ಬಂದವರಿಗೆ ಕರೆ ಮಾಡಿ ವಿಷಯ ತಿಳಿಸಲು ಉಪಕರಿಸಿದೆನು. ಸುಮಾರು ೫ ಗಂಟೆಗೆ ವಿಮಾನ ನಿಲ್ದಾಣ ವನ್ನು ಬಿಟ್ಟು ಮನೆಯ ಕಡೆ ಟ್ಯಾಕ್ಷ್ಸಿ ಯಲ್ಲಿಪ್ರಯಾಣ ಬೆಳೆಸಿದೆನು. ಮಾರ್ಗ ಮದ್ಯೆ ಟ್ಯಾಕ್ಷ್ಸಿ ಚಾಲಕನ ದೂರವಾಣಿ ಉಪಯೋಗಿಸಿ ನನ್ನ ಸ್ನೇಹಿತನಿಗೆ ಕರೆ ಮಾಡಿದೆನು. ೬ ಗಂಟೆಗೆ ಮನೆ ಸೇರಿದೆನು. ಇಲ್ಲಿಯೂ ನನಗೆ ಮತ್ತೊಂದು ಆಘಾತವಾಯಿತು. ಟ್ಯಾಕ್ಷ್ಸಿ ಯವನು ಮೀಟರ್ ಗಿಂತ ಹೆಚ್ಚು ಶುಲ್ಕ ವಿಧಿಸಿದನು. (ಅಂದರೆ ಒಂದೂವರೆ) ಆದರೆ ಇಲ್ಲಿ ನಿಮಗೆ ರಶೀದಿ ಸಿಗುತ್ತೆ ಅಷ್ಟೇ. ಈಗ ನನ್ನ ಸ್ನೇಹಿತನ ದೂರವಾಣಿ ಉಪಯೋಗಿಸಿ ನನ್ನ ಅರ್ಧಾಂಗಿಗೆ ಕರೆ ಮಾಡಿ, ನನ್ನ ಸುರಕ್ಷಿತವಾದ ಆಗಮನವನ್ನು ತಿಳಿಸಿದೆನು.

Friday, August 5, 2011

The Perferct point snaps..... --> Skilled Photography











Wednesday, June 29, 2011

ಶಹಬ್ಬಾಸ್ ಅಮೆರಿಕ - ಹಿಂದು ದೇವತೆಗಳೊಂದಿಗೆ ಅಮೆರಿಕ ಅಂಚೆಚೀಟಿ

ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ ww.USA-Postage.com, ಏಳು ಅಧ್ಯಾತ್ಮಿಕ ವಿನ್ಯಾಸದಲ್ಲಿ ಅಂಚೆ ಚೀಟಿಗಳನ್ನು ಹೊರತಂದಿದೆ. ಸಾಯಿಬಾಬಾ, ಮಹಾಲಕ್ಷ್ಮಿ , ಶ್ರೀ ವೆಂಕಟೇಶ್ವರ, ಸುಬ್ರಹ್ಮಣ್ಯ, ವಿನಾಯಕ, ಶಿವಪಾರ್ವತಿ, ಶ್ರೀಕೃಷ್ಣನ ಚಿತ್ರಗಳೊಂದಿಗೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಈ ರೀತಿಯ ಅಂಚೆಚೀಟಿಗಳನ್ನು ಹೊರತರುತ್ತಿರುವುದು. ಮತ್ತೆಲ್ಲೂ ಲಭ್ಯವಾಗದ ವಿಶಿಷ್ಟ ವಿನ್ಯಾಸಗಳಲ್ಲಿ ಈ ಅಂಚೆಚೀಟಿಗಳನ್ನು ರೂಪಿಸಲಾಗಿದೆ. ಉಡುಗೊರೆ ರೂಪದಲ್ಲಿ ಕೊಡಲು, ವಿಶೇಷ ಸಂದರ್ಭಗಳಲ್ಲಿ ಬರೆಯುವ ಪತ್ರಗಳಿಗೆ ಅಂಟಿಸಲು ಈ ಅಂಚೆಚೀಟಿಗಳನ್ನು ಬಳಸಿಕೊಳ್ಳಬಹುದು.

ಈ ರೀತಿಯ ವಿಭಿನ್ನ ಅಂಚೆಚೀಟಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅಮೆರಿಕಾದಲ್ಲಿನ ಭಾರತೀಯರು ಇವುಗಳನ್ನು ಆನ್ ಲೈನ್ ನಲ್ಲಿ ಖರೀಸಬಹುದು. ಪ್ರತಿ ಅಂಚೆಚೀಟಿಯ ಮಖ ಬೆಲೆ 18.99 ಡಾಲರ್. ಭಾರತೀಯ ದೇವತೆಗಳು ಅಮೆರಿಕಾ ಅಂಚೆಚೀಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

2011ರಲ್ಲಿ ಹುಟ್ಟಿ ಬೆಳೆದ ಮಾರ್ಡ್ರನ್ ಗಾದೆಗಳು

ಒರಿಜಿನಲ್ ಗಾದೆಗಳು, ನುಡಿಗಟ್ಟುಗಳನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿ 2011ರ ಜನ ಜೀವನಶೈಲಿಗೆ ಹೊಂದುವ ಕೆಲವು ಗಾದೆಗಳ ಸಂಗ್ರಹ ಇಲ್ಲಿದೆ. ಹೆಚ್ಚು ಪೀಠಿಕೆ ಬೇಡ, ಸುಮ್ಮನೆ ಓದಿ ಆನಂದಿಸಿ

ಆಳಾಗಿ ದುಡಿ; ಹಾಳಾಗಿ ಹೋಗು

* ಕೈ ಕೆಸರಾದರೆ ನಾನೇನು ಮಾಡಲಿ?

* ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು

* ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ

* ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..

* ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ

* ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು

* ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?

* ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.

* ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ

* ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..

* ಗೆಳೆಯರ ಜಗಳ ಗುಂಡು ಹಾಕುವ ತನಕ..

* ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು.

Wednesday, March 23, 2011

Chocolate names in the mouth of Lovers

PERK - Perfect Emotional Romantic Kiss.
MUNCH - Meet Urgetnly Now for a Charming Hug.
KIT KAT - Kiss In Time, Kiss Any Time
DAIRY MILK - Darling Always I Remeber You, Mostly In Loving Kisses.
OK - One Kiss.....
Which one you are getting to your Lover ?

Thursday, February 17, 2011

ಅಮೆರಿಕ ಲೈಫು ಇಷ್ಟೇನೆ ...!!!

ತಿಂಗಳ ಕೊನೆಯ ಡಾಲರಿಗಾಗಿ
ವಾರ ಪೂರ್ತಿ ಯಾರಿಗೋ ದುಡಿದು
ವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ
ಪಾರ್ಟಿ ಕ್ಲಬ್ಬಿನ ಲೋಕವ ಸೇರು
ಲೈಫು ಇಷ್ಟೇನೆ ...!


ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು
ಡಾಲರ್ ಜೊತೆಗೆ ರೂಪಾಯಿ ಗುಣಿಸು
ಆರ್ಕುಟ್ ಫೇಸ್ಬುಕ್ ಸ್ಕೈಪನೆ ಜಪಿಸಿ
ಲ್ಯಾಪ್-ಟಾಪ್ ಅಲ್ಲೇ ಜೀವನ ಮುಗಿಸು
ಲೈಫು ಇಷ್ಟೇನೆ ...!

ಮಸಾಲೆ ಊಟವ ಮನದಲೆ ನೆನೆದು
ಬರ್ಗರ್ ಚೀಸು ಕಣ್ಣ್ಮುಚ್ಚಿ ತಿಂದು
ನೀರಿನ ಬದಲು ಕೂಕನೆ ಕುಡಿದು
ಬೊಜ್ಜು ತುಂಬಿದ ಹೊಟ್ಟೆಯ ನೋಡು
ಲೈಫು ಇಷ್ಟೇನೆ ...!

ರೋಡು ಕಾರು ಆರಾಮು ನೋಡಿ
ನಮ್ ದೇಶಾನ ಉದ್ದಕ್ಕೂ ತೆಗಳು
ಟ್ರಾಫಿಕ್ ಅಲ್ಲಿ ಟಿಕೇಟು ಸಿಕ್ರೆ
ನಮ್ಮೊರ್ ಮಾಮನೆ ಸರಿ ಅಂತ ಹೊಗಳು
ಲೈಫು ಇಷ್ಟೇನೆ ...!

ಲಾಂಗ್ ವೀಕೆಂಡ್ಗೆ ಲಾಂಗ್ ಲಾಂಗ್ ಪ್ಲಾನು
ಮೂರ್ ದಿನದಲ್ಲಿ ಆರೂರ್ ಸುತ್ತು
ನಮ್ ದೇಶಾನೇ ಸರಿಯಾಗಿ ನೋಡ್ದೆ
ಅಮೆರಿಕ ಮಾತ್ರ ಪೂರ್ತಿ ನೋಡ್ಕೋ
ಲೈಫು ಇಷ್ಟೇನೆ...!

ಫೋನು ಕ್ಯಾಮೆರಾ ಡೀಲ್ಅಲ್ಲಿ ಮುಳುಗು
ಬೇಕೋ ಬೇಡವೋ ಎಲ್ಲಾನು ಕೊಂಡ್ಕೋ
ಹಾಗು ಹೀಗೂ ಇಂಡಿಯಾಗೆ ಸೇರ್ಸು
ಎಲ್ಲಾರ್ಗೂ ಹಂಚಿ ದೊಡ್ಡತನ ತೋರ್ಸು
ಲೈಫು ಇಷ್ಟೇನೆ ...!

ಈ ಬರಹ ನನ್ನದಲ್ಲ. ನನ್ನಂತೆಯೇ ಓರ್ವ ಅಮೆರಿಕ ವನ್ನು ಸುತ್ತಿದವರು ಬರೆದಿದ್ದು..........

Friday, January 21, 2011

Changing the names of bangalore by US Visitors/Tourists..

In Bangalore, the US tourists and visitors decide to change or modify the names of few places as per their pronunciation/understanding. The list goes as below..
Eajipura - Easy Pura
Domlur - Dumb lur
Jayanagar - Joy Nagar
Lakkasandra - Luck Sandra(Sandra as in Sandra Bullock)
Jakkasandra - Jack Sandra
Bommasandra - Bum Sandra
Bhoopasandra - B**b Sandra ;-)
Marathalli - Marta Halli
Yelahanka - You All Hunk Huh ?
Madiwala - My Diva La
Yeshwantpur - Yes Want Pure
Hoody - Howdy
Koramangala - Core Mangla
Shivaji Nagar - She Wow Jee Nagar / Schwarzzenegger
Alsur - All Sore ?
Peenya - Pain ya
Basavanagudi - Bus Van Goody
Hosa road - whose ya road
Shikari palya - Shakira Palya :-) lol

Monday, January 3, 2011

Train your brain 50% faster

Can U read this?

fi yuo cna raed tihs, yuo hvae a sgtrane mnid, too. Cna yuo raed tihs? Olny 55 plepoe tuo fo 100 anc.

i cdnuolt blveiee taht I cluod aulaclty uesdnatnrd waht I was rdanieg. The phaonmneal pweor of the hmuan mnid, aoccdrnig to a rscheearch at Cmabrigde Uinervtisy, it dseno't mtaetr in waht oerdr the ltteres in a wrod are, the olny iproamtnt tihng is taht the frsit and lsat ltteer be in the rghit pclae. The rset can be a taotl mses and you can sitll raed it whotuit a pboerlm. Tihs is bcuseae the huamn mnid deos not raed ervey lteter by istlef, but the wrod as a wlohe. Azanmig huh? yaeh and I awlyas tghuhot slpeling was ipmorantt! if you can raed tihs forwrad it.

If you can read this, your brain is 50% faster than those who can't.

Thursday, November 25, 2010

Sonu and Shreya rocks in this melodious song from CHIRU Kannada movie

ಇಲ್ಲೆ ಇಲ್ಲೆ ಎಲ್ಲೊ, ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆ ವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೆಳದೇನೆ ನನಗೆ ಏನೋ ಆಗಿದೆ

ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೆಳದೇನೆ ನಿಂಗೆ ಏನೋ ಆಗಿದೆ

ಮುಚ್ಚು ಮರೆಯ ಮಾಡದೆ ಹುಚ್ಚು ಮನವು ಕಾಡಿದೆ
ಏನು ಸ್ಪರ್ಶವಾಗದಂಥ ಭಾವ ಇಷ್ಟವಾಗಿದೆ

ಇಂಥ ಆಸೆ ಏಕಿದೆ, ನಂಗೆ ಅರ್ಥ ಆಗಿದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರ ಹೋಗದೆ

ನಾನು ನೋಡೋ ಲೋಕವೆಲ್ಲ ಪ್ರೆಮಲೋಕವನ್ಥಿದೆ
ಹೇಳದೇನೆ ಕೆಳದೇನೆ ನನಗೆ ಏನೋ ಆಗಿದೆ

ಉಸಿರು ಉಸಿರಿನಲ್ಲೂ ಯಾರೋ ಬೆರೆತ ಸೂಚನೆ
ಎಂಧು ಹೀಗೆ ಇರಲಿ ಇಂಥ ಮಧುರವಾದ ಯಾತನೆ

ಏಕೆ ಇಂಥ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನು

ಸವಿಯೋ ಸವಿಯೋ ನನ್ನ ಒಲವೆ ಖುಷಿಯ ಸ್ಪರ್ಷವಾಗಿದೆ
ಹೇಳದೇನೆ ಕೆಳದೇನೆ ನನಗೆ ಏನೋ ಆಗಿದೆ

ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೆಳದೇನೆ ನಿನಗೆ ಏನೋ ಆಗಿದೆ...

ಇಲ್ಲೆ ಇಲ್ಲೆ ಎಲ್ಲೊ ನನ್ನ ಮನಸು ಕಾಣೆಯಾಗಿದೆ...

Saturday, October 23, 2010

ಅಮೆರಿಕದಲ್ಲಿ ಹೀಗೊಂದು ದೆವ್ವಗಳ ಹಬ್ಬ.. ಹ್ಯಾಲೋವೀನ್

ಅಮೇರಿಕಾದಲ್ಲಿ ಹ್ಯಾಲೋವೀನ್ (Halloween) ಅಂತ ಒಂದು ಹಬ್ಬವಿದೆ. ಎಲ್ಲರು ದೇವರುಗಳಿಗೆ ಹಬ್ಬ ಮಾಡಿದರೆ, ಇವರು ದೆವ್ವಗಳಿಗೆ ಈ ಹಬ್ಬ ಮಾಡ್ತಾರೆ. ನಮ್ಮ ಹಿಂದೂ ದೇಶದಲ್ಲಿ ಗಣಪತಿ, ದುರ್ಗಿ ಯ ಹಬ್ಬಗಳ ಸಮಯದಲ್ಲಿ, ದೇವರ ಆಕಾರವನ್ನು ಬೀದಿ ಬೀದಿ ಗಳಲ್ಲಿ, ಕೂಡಿಸುವ ಹಾಗೆ, ಇಲ್ಲಿ ದೆವ್ವಗಳನ್ನು ಕೂಡಿಸುತ್ತಾರೆ. ಮನೆಗಳಲ್ಲಿ, ಮಾಲುಗಳಲ್ಲಿ ದೆವ್ವಗಳ ಆಕಾರವನ್ನು ಮಾಡಿ ಕೆಲವು ಕಡೆ ಸ್ಪರ್ಧಾತ್ಮಕವಾಗಿ (ಭಾರತದಲ್ಲಿ ಗಣೇಶನನ್ನು ಕೂಡಿಸುವ ಹಾಗೆ, ವಿವಿಧ ಬಣ್ಣ, ಆಕಾರ, ಗಾತ್ರ ) ಅಲಂಕಾರ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಪ್ರತಿ ವರುಷ ಅಕ್ಟೋಬರ್ ತಿಂಗಳಿನ ಕೊನೆಯ ದಿನದಂದು ಆಚರಿಸುತ್ತಾರೆ. ಇಂದಿನಿಂದಲೇ ಇಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆ. ಹ್ಯಾಲೋವೀನ್ ಸಂದರ್ಭದಲ್ಲಿ ಭಯ ಹುಟ್ಟಿಸುವ (ದಿಗಿಲೆಬ್ಬಿಸುವ) ಮುಖವಾದ, ವೇಷಭೂಷಣ , ವಸ್ತ್ರ ಗಳ್ಳನ್ನು ಧರಿಸುವುದು ವಾಡಿಕೆಯಾಗಿದೆ. ಈ ದಿನದಂದು ಕುಂಬಳಕಾಯಿಯ(Pumpkin) ಒಳ ತಿರುಳನ್ನು ತೆರೆದು, ಒಂದು ಮಡಿಕೆಯ ಆಕೃತಿಯಲ್ಲಿ ಕಡಿದು, ಮುಖವಾಡ ಮಾಡಿ, ಅದರ ಒಳಗೆ ಮೇಣದ ಬತ್ತಿಯನ್ನು ಹೊತ್ತಿಸುತ್ತಾರೆ. ಈ ಮುಖವಾಡಕ್ಕೆ Jack-O-Lantern ಎಂದು ಹೆಸರು. ಇಡೀ ಆಚರಣೆಗೆ ಭಯದ ಲೆಪನವಿದ್ದರೂ, ಎಲ್ಲೋ ಒಂದು ಕಡೆ ನಮ್ಮ ಭಾರತದ ಹಬ್ಬಗಳಿಗೂ ಸಮವಾಗುತ್ತದೆ. ಇದನ್ನು ನಾವು ಸುಗ್ಗಿಯ ಸಂಕ್ರಾಂತಿ ಎಂತಲೂ ತಿಳಿಯಬಹುದು. ದುಷ್ಟ ದಹನ ಮಾಡುವುದರಿಂದ ಇದು ಹೋಳಿ ಹಬ್ಬಕೆ ಕೂಡ ಸಮ. ಇನ್ನು ಮನೆಗಳ ಮುಂದೆ ಮೇಣದ ಬತ್ತಿಗಳು ಕಂಗೊಲಿಸುವುದರಿಂದ ಮತ್ತು ನಮ್ಮ ದೀಪಗಳ ಹಬ್ಬಕ್ಕೆ ಹತ್ತಿರವಾದುದಕ್ಕೆ ದೀಪಾವಳಿ ಎಂತಲೂ ತಿಳಿಯಬಹುದು. ಇನ್ನು ಎಲ್ಲರು, ಅದರಲ್ಲಿ ಮಕ್ಕಳು ವಿವಿಧ ವೇಷ ಭೂಷಣ ಮಾಡುವುದರಿಂದ ಇದು ನಮ್ಮ ಕೃಷ್ಣ ಜನ್ಮಾಷ್ಟಮಿಗು ಕೂಡ ಸಮ. ಇಂದಿಗೆ ಫಾಲ್ ಋತು (ಎಲೆಗಳು ಉದುರುವುದು) ಕೂಡ ಮುಗಿಯುತ್ತದೆ, ಮತ್ತು ಎಲ್ಲರು ಓಕ್ ಎಲೆಗಳನ್ನು ತಂದು ತಮ್ಮ ಮನೆಗಳನ್ನು ಸಿನ್ಗರಿವುದರಿಂದ ಇದು ನಮ್ಮ ಬೇವು, ಮಾವು, ಬೆಲ್ಲದ ಯುಗಾದಿಗೆ ಕೂಡ ಹತ್ತಿರವಾದದ್ದು ಎನ್ನೋಣವೇ ? ನೀವೇ ನಿರ್ಧರಿಸಿ ತಿಳಿಸಿ.

ಇನ್ನು ಇಂದಿನ ರಾತ್ರಿ ಇಲ್ಲಿನ ಜನ ಒಂದು ಆಟ ಆಡುತ್ತಾರೆ. ಅದರ ಹೆಸರು Trick-Or-Treat. ಅಂದು ರಾತ್ರಿ ನಿಮ್ಮ ಮನೆಗೆ ಯಾರಾದರು ಬಂದು ಬಾಗಿಲು ತಟ್ಟಿದರೆ ಅದು ಹ್ಯಾಲೋವೀನ್ ಕಂಡಿತಾ. ನಾವು ಮನೆ ಬಾಗಿಲು ತೆಗೆದ ಕೂಡಲೇ ದೆವ್ವದ ದರ್ಶನ. ನಂತರ ಇವರು ಟ್ರಿಕ್ ಆರ್ ಟ್ರೀಟ್ ಅಂತ ಕೇಳ್ತಾರೆ. ನೀವು ಟ್ರಿಕ್ ಅಂತ ಒಪ್ಪಿಕೊಂಡರೆ ನೀವು ಒಂದು ಜಾದೂ ಮಾಡಿಸಿ ತೋರಿಸಬೇಕು. ಇಲ್ಲವಾದಲಿ ಟ್ರೀಟ್ ಕೊಡಬೇಕು. ಅದಕ್ಕೆ ನಿಮ್ಮ ಮನೆಯಲ್ಲಿ ಒಂದಷ್ಟು ಚಾಕಲೇಟ್ ಗಳನ್ನು ತಂದಿರಿಸಿ.
ಹ್ಯಾಪಿ ಹ್ಯಾಲೋವೀನ್ :)


Wednesday, October 20, 2010

ಇಷ್ಟ ಕಷ್ಟ ದ ಕೊಡುಗೆ

ಇಷ್ಟವೆಂದು ಎನಬೇಡ, ಕಷ್ಟವೆಂದು ಎನಬೇಡ
ಇಷ್ಟ, ಕಷ್ಟದ ಕೊಡುಗೆ ಅವನಿಂದ ನಿನಗೆ
ಇದು ಬೇಕು ನನಗೆ, ಇದು ಬೇಡವೆನಗೆ
ನಿನ್ನಿಚ್ಚೆಗಿಲ್ಲ ಬೆಲೆ !!!

"ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" , ಎಂಬುದು ದಾಸವಾಣಿ. ಇದರಲ್ಲಿ ಇಷ್ಟ, ಕಷ್ಟ ದ ಪ್ರಶ್ನೆಯೇ ಇಲ್ಲ. ಏಕೆಂದರೆ ಅನ್ನ, ವಸ್ತ್ರ, ವಸತಿ, ಪ್ರತಿಯೊಬ್ಬ ಮನುಷ್ಯನು ಅನಿವಾರ್ಯವಾಗಿ ಅಪೇಕ್ಷಿಸುವ ಮೂಲಭೂತ ವಸ್ತುಗಳು. ಇವುಗಳಿಗಾಗಿ ಮಾತ್ರ ಆತನ ಹೋರಾಟ. ಅತಿಯಾಸೆಯ ಜನರು ಇಂದು ನಮ್ಮ ಮುಂದೆ ಕಂಡು ಬರುತ್ತಾರೆ. ಇಷ್ಟವೆಂದು, ಆಸೆಪಟ್ಟು, ನಂತರ ಅದನ್ನು ಅನುಭವಿಸಲು ಕಷ್ಟ ಪಡುತ್ತಾರೆ ಅವರು. ಏಕೆಂದರೆ ಅತಿ ಯಾವತ್ತೂ ಒಳ್ಳೆಯದಲ್ಲ.
ನನಗದು ಬೇಕು, ನನಗದು ಬೇಡ ಎಂದು ಹಠ ಮಾಡುವವರಿದ್ದಾರೆ. ನನಗಿದು ಇಷ್ಟ ಎನ್ನುವವರು ಇದ್ದಾರೆ. ಆದರೇ ನಮ್ಮ ಈ ರೀತಿ ನೀತಿಗಳಿಗೆ ಏನಾದರು ಅರ್ಥ ವಿದೆಯೇ ? ಎಲ್ಲವು ವಿಧಿಯು ಬರೆದ ಹಾಗೆಯೇ ನಡೆಯುತ್ತದೆ. ನಮ್ಮ ಹೋರಾಟ ಏನಿದ್ದರು ಬದುಕಿಗಾಗಿ ಮಾತ್ರ. ಆದರೇ ಆ ಬದುಕನ್ನು ಕೊಡುವವನೂ ಅವನೇ. ಅಂದರೆ ಹೋರಾಟಕ್ಕೆ ಏನು ಬೆಲೆ ? ಎಲ್ಲವನ್ನು ಅವನಿಗೆ ಒಪ್ಪಿಸಿ, ನೀನಾಡಿಸಿ ದಂತೆ ಆಡುವೆ ನಾನು, ಎಂದು ನಿರ್ಲಿಪ್ತತೆ ಯಿಂದ ಇರಬಹುದಲ್ಲವೇ ? ಆದರೇ, ಅಂತರಂಗದಲ್ಲಿ ಬೆಳಕೊಂದು ಇದ್ದಾರೆ ಅದು ನಮ್ಮನ್ನು ಸುಮ್ಮನೆ ಇರಗೂಡುವುದಿಲ್ಲ. ಫಲಿತಾಂಶ ನಮ್ಮ ಕೈಯಲ್ಲಿ ಇಲ್ಲ ಎಂಬುದನ್ನು ಅರಿತು ಪ್ರಯತ್ನಿಸಬೇಕು. ಅಲ್ಪಜ್ಞಾನಿ ಮಾನವನಿಗೆ, ಸರ್ವಜ್ನನಾದ ಭಗವಂತನನ್ನು ಕಲ್ಪಿಸಿಕೊಳ್ಳುವುದು ಅಸಾದ್ಯವಾಗಿರುವಾಗ ಇನ್ನು ಅರಿಯುವುದೆಂತು ? ಅರಿಯಲು ಸಾಧ್ಯವಾಗದಾಗ ಅವನನ್ನು ಮೀರುವುದೆಂತು? ಹಾಗಾಗಿ ಎಲ್ಲವನ್ನು ಅವನಿಗೊಪ್ಪಿಸಿ, ಫಲಾಪೇಕ್ಷೆ ಇರಿಸಿಕೊಳ್ಳದೆ ಬಂದಿದ್ದನ್ನು ಸ್ವೀಕರಿಸುವ ಭಾವ ರೂಢಿಸಿಕೊಂಡರೆ, ಅದು ಒಳಿತಿನ ದಾರಿ.
ಕಷ್ಟ - ಇಷ್ಟ, ಬೇಕು - ಬೇಡ, ಎಂಬ ಭಾವದಿಂದ ಬದುಕಿನ ಪರಿಪೂರ್ಣತೆಯನ್ನು ಅನುಭವಿಸಲು ಸಾದ್ಯವಿಲ್ಲ. ಕಷ್ಟದಲ್ಲಿಯೇ ಇಷ್ಟವಿದೆ. ಬೇಡದೊಡಲಿನಲ್ಲಿಯೇ ಬೇಕೆಂಬುದಿದೆ. ಅವನು ತಿರುಗಿಸುತ್ತಿರುವ ಬುಗುರಿಯಾಗಿರುವ ನಾವು ಅವನನ್ನು ಮೀರುವುದೆಂತು ? ನಾವು ಮಾಡುವ ಕೆಲ್ಸವೆಲ್ಲವನ್ನು ಅವನ ಪೂಜೆ ಎಂದೇ ತಿಳಿಯಬೇಕು. ಪೂಜೆ ಎಂದರೆ ನಮ್ಮನ್ನು ಅವನಿಗೊಪ್ಪಿಸುವ ರೀತಿ. ಸರ್ವಸ್ಥವನ್ನು ಅವನಿಗೆ ಸಮರ್ಪಿಸಿದಾಗ ಮಾತ್ರ ನಮ್ಮ ಬದುಕಿಗೆ ಒಂದರ್ಥ ಕಂಡು ಬರುತ್ತದೆ. ನಮ್ಮ ಇಷ್ಟವು ಅವನೇ, ಕಷ್ಟವು ಅವನೇ, ನಮ್ಮ ಬೇಕು ಅವನೇ, ನಮ್ಮ ಬೇಡವು ಅವನೇ, ಎಂದರಿತು ಮಾಡುವ ಕೆಲಸಕ್ಕೆ, ಅವನು ತನ್ನ ಸಮ್ಮತಿಯ ಮುದ್ರೆಯನ್ನು ಒಡ್ಡುತ್ತಾನೆ. ಬದುಕಿಗೊಂದು ಧನ್ಯತೆಯನ್ನು ಕರುಣಿಸುತ್ತಾನೆ.

Friday, October 8, 2010

ಭಗವದ್ಗೀತೆ ಯ ಒಂದು ಸಾಲಿನ ಅರ್ಥ ಹೀಗಿದೆ....

ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ.
ಆಗುವುದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ.
ಆಗಲಿರುವುದು, ಅದೂ ಒಳ್ಳೆಯದೇ ಆಗಲಿದೆ.
ರೋದಿಸಲು ನೀನೇನು ಕಳೆದು ಕೊಂಡಿರುವೆ.
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು ?
ನಾಶವಾಗಲು ನೀನು ಮಾಡಿರುವುದಾದರು ಏನು ?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ.
ಏನನ್ನು ನೀಡಿದರು ಅದನ್ನು ಇಲ್ಲಿಗೆ ನೀಡಿರುವೆ.
ನಿನ್ನೇ ಬೇರೆ ಯಾರದ್ದೋ ಆಗಿದ್ದು, ಇಂದು ನಿನ್ನದಾಗಿದೆ ಮತ್ತು ನಾಳೆ ಅದು ಇನ್ನಾರದ್ದೋ ಆಗಲಿದೆ.
ಅದಕ್ಕೆ ಹೇಳುವುದು, ಪರಿವರ್ತನೆ ಜಗದ ನಿಯಮ.

Friday, October 1, 2010

ಜಾಕಿ ಚಿತ್ರದ - ಯೋಗರಾಜ ಭಟ್ಟರ ಬೆರಳಲ್ಲಿ ಹೆಣೆದಿರುವ ಹಾಡು...


ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರ, 'ಜಾಕಿ' ಚಿತ್ರದಹಾಡುಗಳಲ್ಲಿ ಈ ಹಾಡು ಈಗಾಗಲೆ ಜನಪ್ರಿಯವಾಗಿದೆ. ಎಫ್ ಎಂ ರೇಡಿಯೋಗಳಲ್ಲಿ ಈ ಹಾಡು ಮೇಲಿಂದ ಮೇಲೆ ಪ್ರಸಾರವಾಗುತ್ತಾ ಕೇಳುಗರ ಮನವನ್ನು ತಣಿಸುತ್ತಿದೆ. ಯೋಗರಾಜ್ ಭಟ್ಟರು ನೇರವಾಗಿ ಯುವಕರ ಹೃದಯಕ್ಕೆ ಲಗ್ಗೆ ಹಾಕಿ ಈ ಹಾಡಿನ ಮೂಲಕ ಅವರ ನರನಾಡಿಗಳನ್ನು ಮೀಟಿದ್ದಾರೆ. ಈ ಹಾಡನ್ನು ಅವರು ಬರೆದಷ್ಟೇ ಸೊಗಸಾಗಿ ಟಿಪ್ಪು ಹಾಡಿದ್ದಾರೆ, ವಿ ಹರಿಕೃಷ್ಣ ಹಾರ್ಮೋನಿಯಂ ನುಡಿಸಿದ್ದಾರೆ.


ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಕಂಡು ಕಂಡು ಬಿದ್ದಂಗಾಯಿತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಾಂಗಾಯಿತು ಹಾರ್ಟಿನಲಿ
ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ
ಬೈಕಿನಲಿ...ಬೈಕಿನಲಿ...ಬೈಕಿನಲಿ



ಟಾಪು ಗೇರು.. ಹಾಕಂಗಿಲ್ಲ
ಸುಮ್ನೆ ಬ್ರೇಕು.. ಹೊಡ್ಯಂಗಿಲ್ಲ
ಟಾಪು ಗೇರು ಹಾಕಂಗಿಲ್ಲ... ಸುಮ್ನೆ ಬ್ರೇಕು ಹೊಡ್ಯಂಗಿಲ್ಲ
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು
ತು ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು



ಒಂದು ಮಾತು.. ಕೇಳಲಿಲ್ಲ
ಒಂದು ಮಾತು ಕೇಳಲಿಲ್ಲ..ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನು ಕೊಂಡುಕೊಂಡು
ತಡ ಮಾಡದೆ ಪಾಯವ ತೋಡಿ ಬಿಟ್ಲು
ಹೂವಿನಂತ ಹುಡುಗ ನಾನು ತುಂಬ ಮೃದು
ಹೂವಿನಂತ ಹುಡುಗ ನಾನು ತುಂಬ ಮೃದು
ಹೆಣ್ ಮಕ್ಳೇ ಸ್ಟ್ರಾಂಗು ಗುರು
ರಾಂಗು ಗುರು.. ರಾಂಗು ಗುರು.. ರಾಂಗು ಗುರು..ರಾಂಗು ಗುರುಶಿವ



ಉಣ್ಣಲಿಲ್ಲ.. ತಿನ್ನಲಿಲ್ಲ.. ಮಟ ಮಟ.. ಮಧ್ಯಾನವೇ
ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮಧ್ಯಾನ
ಕುಂತು ಬಿಟ್ಳು ಹಿಂದುಗಡೆ ಸೀಟಿನಲಿ
ನಾವ್ ಹೊಡ್ಕೋ ಬೇಕು ನಮ್ಮದೆ ಬೂಟಿನಲಿ



ಒಂದು ಕೇಜಿ.. ಅಕ್ಕಿ ರೇಟು
ಒಂದು ಕೇಜಿ ಅಕ್ಕಿ ರೇಟು ಮೂವತ್ ರೂಪಯ್ ಆಗಿ ಹೋಯ್ತು
ಇಜಿಯಾಗಿ ಹೇಗೆ ನಾನು ಪ್ರೀತಿಸಲಿ ಅದರಲ್ಲು ಮೊದಲನೆ ಭೇಟಿಯಲಿ
ರೇಷನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ರೇಷನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ಸಂಸಾರ ಬೇಕಾ ಗುರು
ಬೇಕು ಗುರು..ಬೇಕು ಗುರು..ಬೇಕು ಗುರು..ಬೇಕು ಗುರುಶಿವ

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು