Saturday, March 17, 2012
Tuesday, January 24, 2012
Melodious Song - Sidlingu
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ?
ಹರುಷವಾ ತಂದಿಡುವೇ... ವ್ಯಸನವಾ ಬೆಂಬಿಡುವೇ...
ಬಂದರೂ ಅಳುವೂ ನಗಿಸೀ ನಲಿವಾ.... ಮ... ನ... ವೇ...
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ?
ಹರುಷವಾ ತಂದಿಡುವೇ... ವ್ಯಸನವಾ ಬೆಂಬಿಡುವೇ...
ಬಂದರೂ ಅಳುವೂ ನಗಿಸೀ ನಲಿವಾ.... ಮ... ನ... ವೇ...
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ...?
ನಾನು ನನ್ನದೆನ್ನುವಾ ನಿನ್ನಯಾ ತರ್ಕವೇ ಬಾಲಿಶಾ...
ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ...
ಕಲ್ಮಶಾ ನಿಶ್ಕಲ್ಮಶಾ ಥರ ಥರಾ ನಿನ್ನ ವೇಷ...
ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ...
ಇದ್ದರೂ ಜೊತೆಗೆ ದೂರಾ ಇರುವಾ ಮ..ನ..ವೇ
ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ...
ಕಲ್ಮಶಾ ನಿಶ್ಕಲ್ಮಶಾ ಥರ ಥರಾ ನಿನ್ನ ವೇಷ...
ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ...
ಇದ್ದರೂ ಜೊತೆಗೆ ದೂರಾ ಇರುವಾ ಮ..ನ..ವೇ
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತ ರ ವೇ...?
ಬೇಕು ಬೇಡ ಎನ್ನುವಾ ಗೊಂದಲ ಸೃಷ್ಟಿಸೋ ಮಾಯೆ ನೀ....
ತಪ್ಪು ವಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ....
ಕಲ್ಪನೆ ಪರಿಕಲ್ಪನೇ ವಿಧ ವಿಧಾ ನಿನ್ನ ತಾಣಾ...
ಬಣ್ಣನೇ ಬದಲಾವಣೆ ಎಲ್ಲಾ ನಿನ್ನಾ ಹೊಣೇ...
ಕಂಡರೂ ಸಾವೂ... ಬದುಕೂ... ಎನುವಾ ಮ..ನ..ವೇ...
ತಪ್ಪು ವಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ....
ಕಲ್ಪನೆ ಪರಿಕಲ್ಪನೇ ವಿಧ ವಿಧಾ ನಿನ್ನ ತಾಣಾ...
ಬಣ್ಣನೇ ಬದಲಾವಣೆ ಎಲ್ಲಾ ನಿನ್ನಾ ಹೊಣೇ...
ಕಂಡರೂ ಸಾವೂ... ಬದುಕೂ... ಎನುವಾ ಮ..ನ..ವೇ...
ಎಲ್ಲೆಲ್ಲೊ ಓಡುವ ಮನಸೇ...ಹಾಂ... ಹಾ... ಲಾ...ಲಾ...ಲ...
Thursday, October 20, 2011
ಅಂತು ಇಂತೂ ಹೊರಟಿತು ನಮ್ಮ ಬೆಂಗಳೂರು ಮೆಟ್ರೋ
ಬೆಂಗಳೂರಿಗರ ಬಹು ನಿರೀಕ್ಷಿತ ಕನಸಿನ ಕೂಸು ಮೆಟ್ರೋ ರೈಲಿನ ಮೊದಲನೇ ಹಂತ, ಅಂತೂ ಇಂದು 20 ಅಕ್ಟೋಬರ್ 2011 ರಂದು 11 ಗಂಟೆಗೆ ಉಧ್ಘಾಟನೆ ಆಗಿದೆ. ಮಹಾತ್ಮಾ ಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ವರೆಗೆ ಈ ಮೆಟ್ರೋ ರೈಲು ಸಂಚರಿಸಲಿದೆ.ಸಂಪೂರ್ಣ ಹವಾ ನಿಯಂತ್ರಿತವಾಗಿರುವ ನಮ್ಮ ಮೆಟ್ರೋ ರೈಲು ಒಂದುಬಾರಿಗೆ ಒಂದು ಸಾವಿರ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ರೈಲು ಬೋಗಿಯ ಒಳಗಿನ ಎರಡೂ ಬದಿಗಳಲ್ಲಿ ಸಿಸಿಟಿವಿ ಹಾಗೂ ಸೀಟಿನ ವ್ಯವಸ್ಥೆ ಮಾಡಲಾಗಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.
ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಸೇವೆ ಕೂಡ ಇದಾಗಿದೆ.
- ಎಂ.ಜಿ.ರಸ್ತೆ,
- ಟ್ರಿನಿಟಿ ರಸ್ತೆ
- ಇಂದಿರಾನಗರ
- ಸ್ವಾಮಿ ವಿವೇಕಾನಂದ ನಗರ
- ಬೈಯಪ್ಪನ ಹಳ್ಳಿ
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ : 1 ನಿಮಿಷ 30 ಸೆಕೆಂಡ್
ಟ್ರಿನಿಟಿ- ಹಲಸೂರು ರಸ್ತೆ : 1 ನಿಮಿಷ 33 ಸೆಕೆಂಡ್
ಹಲಸೂರು - ಇಂದಿರಾನಗರ : 1 ನಿಮಿಷ 45 ಸೆಕೆಂಡ್
ಇಂದಿರಾ ನಗರ- ಸ್ವಾಮಿ ವಿವೇಕಾನಂದ ನಗರ : 1 ನಿಮಿಷ 55 ಸೆಕೆಂಡ್
ಸ್ವಾಮಿ ವಿವೇಕಾನಂದ ನಗರ - ಬೈಯಪ್ಪನ ಹಳ್ಳಿ: 2 ನಿಮಿಷ
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ 10 ರೂ.
ಎಂ.ಜಿ ರಸ್ತೆ - ಹಲಸೂರು 12 ರೂ.
ಎಂ.ಜಿ.ರಸ್ತೆ -ಇಂದಿರಾ ನಗರ 12 ರೂ.
ಎಂ.ಜಿ.ರಸ್ತೆ - ಸ್ವಾಮಿ ವಿವೇಕಾನಂದ ನಿಲ್ದಾಣ 14 ರೂ.
ಎಂ.ಜಿ. ರಸ್ತೆ - ಬೈಯಪ್ಪನ ಹಳ್ಳಿ 15 ರೂ.
ಇನ್ನಷ್ಟು ಸುದ್ದಿಗಳು:
http://kannada.oneindia.in/news/2011/10/18/priyanka-bmrcl-metro-driver-kaggalipura-farmer-daughter-aid0039.htmlhttp://kannada.oneindia.in/news/2011/10/17/namma-metro-bmrcl-sanchar-saral-ಸರಾg-cards-aid0039.ಹ್ತ್ಮ್ಲ್
http://kannada.oneindia.in/news/2011/10/13/bmrcl-namma-metro-inauguration-security-arrangements-aid0039.html
Friday, September 9, 2011
Friday, September 2, 2011
Subscribe to:
Posts (Atom)




































