Tuesday, June 30, 2009

ಸೈಬರ್ ಅಪರಾಧ : ಇ-ಮೇಲ್ ಬಂದರೆ ಎಚ್ಚರವಿರಲಿ

ಸೈಬರ್ ಅಪರಾಧ : ಇ-ಮೇಲ್ ಬಂದರೆ ಎಚ್ಚರವಿರಲಿ

ಯಾವುದೇ ಇ-ಮೇಲ್ ನಿಮಗೆ ಗೊತ್ತಿರುವ ವ್ಯಕ್ತಿಯಿಂದ ಸ್ವೀಕರಿಸಿದ್ದು ಆದರೆ ಆತನ ಇ-ಮೇಲ್ ವಿಳಾಸ ಅನುಮಾನಾಸ್ಪದವಾಗಿದ್ದರೆ ಅಂತಹ ಇ-ಮೇಲ್ ಗಳ ಬಗ್ಗೆ ಜಾಗರೂಕತೆಯಿಂದ ನಿರ್ವಹಿಸಿ ಮತ್ತು ಸೈಬರ್ ತಾಣಗಳಲ್ಲಿ ನಿಮ್ಮ ಇ-ಮೇಲ್ ಬಳಕೆ ಬಹಳ ಎಚ್ಚರಿಕೆಯಿಂದಿರಲಿ, ಸ್ವಲ್ಪ ಮೈಮರೆತರು ಭಾರಿ ಬೆಲೆ ತೆತ್ತಬೇಕಾಗುತ್ತದೆ.

"ದಯವಿಟ್ಟು ಕ್ಷಮಿಸಿ, ನಾನು ವಿಚಾರ ಸಂಕೀರ್ಣಕ್ಕೆಂದು ಭಾಗವಹಿಸಲು ಇಂಗ್ಲೆಂಡ್‌ಗೆ ಪ್ರಯಾಣ ಬೆಳಸಿದ್ದನ್ನು ನಿಮಗೆ ತಿಳಿಸಿರಲಿಲ್ಲ. ಆದರೆ ನೀವು ಈ ಇ-ಮೇಲ್ ಸ್ವೀಕರಿಸಿದ ಕೂಡಲೇ ನನಗೆ ತುರ್ತು ಸಹಾಯಕ್ಕೆ ಬರಬೇಕಾಗಿದೆ, ನಾನು ಹೋಟಲ್‌ಗೆ ಹೋಗುವಾಗ ಮಧ್ಯದಲ್ಲಿ ನನ್ನ ಪರ್ಸು ಕಳೆದುಕೊಂಡಿದ್ದೇನೆ, ಇದರಿಂದ ನನಗೆ ಸದ್ಯದಲ್ಲಿ ಹೋಟಲ್‌ನ ಬಿಲ್ ಪಾವತಿ ಮಾಡಿ ಮನೆಗೆ ಹಿಂದುರುಗಲು ನನಗೆ 3500 ಡಾಲರುಗಳ ಅವಶ್ಯಕತೆ ಇರುತ್ತದೆ. ಯಾವುದೇ ರೀತಿಯಿಂದಲಾದರು ಸರಿ ನನಗೆ ಸಹಾಯ ಮಾಡಿದರೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಒಮ್ಮೆ ಮನೆಗೆ ಹಿಂತಿರುಗಿದಾಗ ನಿಮ್ಮ ಹಣವನ್ನು ಮರುಪಾವತಿಸುತ್ತೇನೆ". ಇಂತಿ, ಮಣಿಶಂಕರ್ ಐಯ್ಯರ್, ಮಾಜಿ ಕೇಂದ್ರ ಸಂಪುಟ ಸಚಿವ.

ಆಶ್ಚರ್ಯವೇ? ನಿಜವಾಗಲೂ ಈ ಮೇಲಿನ ಸಂದೇಶ ಮಾನ್ಯ ಮಣಿಶಂಕರ್ ಐಯ್ಯರ್‌ರವರ ವೈಯಕ್ತಿಕ ಹಾಟ್ ಮೇಲ್ ಇ-ಮೇಲ್ ಐಡಿಯಿಂದ ಅವರ ಇ-ಮೇಲ್ ಅಕೌಂಟಿನಲ್ಲಿದ್ದ ಇತರೇ ಸ್ನೇಹಿತರಿಗೆ ಮತ್ತು ಪರಿಚಯಸ್ತರಿಗೆ ರವಾನೆಯಾದದ್ದು. ಇದರಲ್ಲಿ ಕೂತಹಲಕಾರಿ ವಿಷಯವೆಂದರೆ ಇದರ ಬಗ್ಗೆ ಸ್ವತಃ ಮಣಿಶಂಕರ್ ಐಯ್ಯರ್‌ರವರಿಗೆ ಅರಿವಿಲ್ಲದಿರುದು. ವಾಸ್ತವವಾಗಿ ಮಣಿಶಂಕರ್ ಐಯ್ಯರ್‌ರವರ ವೈಯಕ್ತಿಕ ಇ-ಮೇಲ್ ಐಡಿಯ ಮಾಹಿತಿಯನ್ನು ಅನ್ಯರು ಕಾನೂನಿನ ವಿರುದ್ದವಾಗಿ ಭಿನ್ನಗೊಳಿಸಿ ಅಕ್ರಮವಾಗಿ ಪ್ರವೇಶ ಪಡೆದು ಈ ಇ-ಮೇಲ್ ಮೂಲಕ ಅಲ್ಲಿದ್ದ ವಿಳಾಸಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಮಣಿಶಂಕರ್ ಐಯ್ಯರ್‌ರವರು "ನಾನು ಪ್ರವಾಸ ಕೈಗೊಂಡಿದ್ದು ಅಮೇರಿಕಾದ ಕೊಲಂಬೋ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ವಿಚಾರ ಸಂಕೀರ್ಣಕ್ಕೆ ಭಾಗವಹಿಸಲೇಂದು, ಇದರ ಸ್ವಷ್ಟ ಮಾಹಿತಿ ತಿಳಿದುಕೊಂಡು ಮತ್ತು ನನ್ನ ಈ-ಮೇಲ್ ಅಕೌಂಟನ್ನು ಭಿನ್ನಗೊಳಿಸಿದ್ದಲ್ಲದೇ (ಹ್ಯಾಕ್ ಮಾಡಿದ್ದಲ್ಲದೇ) ನನ್ನ ಇ-ಮೇಲ್ ಗುಪ್ತ ಪದವನ್ನು (ಪಾಸ್‌ವರ್ಡ್‌ನ್ನು) ಸಹಾ ಬದಲಿಸಿ ನನ್ನ ಇ-ಮೇಲ್ ಅಕೌಂಟಿಗೆ ನನ್ನ ಪ್ರವೇಶವನ್ನು ಸಹಾ ನಿರ್ಬಂಧಿಸಿದ್ದಾರೆ. ಆದ್ದರಿಂದ ಈ ದುರುದ್ದೇಶಪೂರಿತ ಇ-ಮೇಲ್‌ನ್ನು ಸ್ವೀಕರಿಸಿದ ಎಲ್ಲರೂ ನಿರ್ಲಕ್ಷಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು.

ಸೈಬರ್ ಅಪರಾಧಿಗಳು ಇತ್ತೀಚೆಗೆ ಮುಂಬೈ ಮೂಲದ ಹೆಸರಾಂತ ಮನೋತಜ್ಞ ಡಾ. ಯೂಸುಫ್ ಅವರ ಇ-ಮೇಲ್ ಐಡಿಯಿಂದ ಹೋಟಲ್ ಬಿಲ್‌ನ ಮರುಪಾವತಿಗಾಗಿ 2000 ಡಾಲರುಗಳಿಗಾಗಿ ಅವರ ಇ-ಮೇಲ್ ಅಕೌಂಟಿನಲ್ಲಿ ಲಭ್ಯವಿದ್ದ ಸ್ನೇಹಿತರಿಗೆ ಮತ್ತು ಪರಿಚಯಸ್ತರಿಗೆ ರವಾನೆಯಾಗಿ ಸಹಾಯಕ್ಕೆ ಮೊರೆಯಿಟ್ಟಿದ್ದರು. ಇದರ ಮೇರೆಗೆ ಹಲವು ಕರೆಗಳನ್ನು ಸ್ವೀಕರಿಸಿದ ಡಾ.ಯೂಸಫ್ ಪರಿಸ್ಥಿತಿ ಮನಗಂಡು ಕೂಡಲೇ ಪೋಲಿಸ್‌ಗೆ ದೂರು ನೀಡಿದರು. ಈ ದೂರಿನ ಮೇರೆ ತಪಾಸಣೆ ಕೈಗೊಂಡ ಪೋಲಿಸರ ಪ್ರಾಥಮಿಕ ವರದಿಯಂತೆ ಇದರ ಹಿಂದೆ ಸೈಬರ್ ಅಪರಾಧಿಗಳು ಇಥಿಯೋಫಿಯಾದಲ್ಲಿ ಗುಂಪಾಗಿ ವ್ಯವಸ್ಥಿತ ಕಾರ್ಯ ಚಟುವಟಿಕೆ ನಡೆಸಿರುವುದು ಕಂಡುಹಿಡಿದಿದ್ದಾರೆ. ಹೆಚ್ಚಿನ ತನಿಖೆಗಾಗಿ ಅಲ್ಲಿನ ಅಂತರ್ಜಾಲ ಸೇವಾ ಸಂಪರ್ಕ ಸಂಸ್ಥೆಗೆ (ಇಂಟರ್‌ನೆಟ್ ಸರ್ವಿಸ್ ಪ್ರವೈಡರ್‌ಗೆ) ಮಾಹಿತಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಅಷ್ಟಲ್ಲದೇ, ಪೋಲಿಸರ ಗುಮಾನಿಯಂತೆ ಇದೇ ರೀತಿಯ ವ್ಯವಸ್ಥಿತ ಜಾಲವೊಂದು ನೈಜಿರಿಯನ್ ಅನ್‌ಲೈನ್ ಜಾಬ್‌ರಾಕೆಟ್ ಹೆಸರಿನಲ್ಲಿ ಜನರನ್ನು ಕೆಲಸ ಕೊಡಿಸುವ ಅಮಿಷವೊಡ್ಡಿ ವಂಚಿಸುತ್ತಿರುವುದನ್ನು ಹೊಲಿಕೆ ಮಾಡಿ ಇದರ ಐಪಿ ವಿಳಾಸದ ಮೇಲೆ ಬಲೆ ಬೀಸಲು ಪ್ರಾರಂಭಿಸಿದ್ದಾರೆ.

ಇಷ್ಟಕ್ಕೆ ಸೀಮಿತವಾಗಿರದ ಈ ಇ-ಮೇಲ್ ಪ್ರಕರಣಗಳು, ನಮ್ಮ ಅನುಭವವಕ್ಕೂ ನಿಲುಕದಂತೆ ಹಲವು ರೀತಿಯಲ್ಲಿ ನೆಡೆದು ಹೋಗುತ್ತವೆ, ಉದಾ:

ಅ. ಇ-ಮೇಲ್ ಸ್ಪೂಫಿಂಗ್‌ಗಳು : ಸ್ವೀಕರಿಸುವ ಮೇಲ್‌ಗಳು ಯಾವಾಗಲು ತಮ್ಮ ಸೃಷ್ಟಿ ಮೂಲದ ಮಾಹಿತಿಯನ್ನು ಬಿತ್ತರಿಸಿದ್ದರು. ಅವುಗಳ ಮೂಲ ಬೇರೆಯದ್ದೇ ಆಗಿರುತ್ತದೆ.

ಆ. ಇ-ಮೇಲ್ ಸ್ಪ್ಯಾಮಿಂಗ್ ಮತ್ತು ಫಿಷಿಂಗ್ : ಸಾಮಾನ್ಯವಾಗಿ ಸ್ಪ್ಯಾಮಿಂಗ್ ಮೇಲ್ ಗಳು ಹೆಚ್ಚು ಆಕರ್ಷಣೀಯವಾಗಿ ಮತ್ತು ಅವಶ್ಯವಿಲ್ಲದವಾಗಿರುತ್ತದೆ. ಇವುಗಳನ್ನು ಬಳಕೆದಾರರನ್ನು ಆಕರ್ಷಿಸಲೆಂದೇ ಕಳುಹಿಸುತ್ತಾರೆ. ಇವುಗಳಲ್ಲಿ ಇಮೇಜ್ ಸ್ಪ್ಯಾಮ್‌ಗಳಾಗಿ ಬರುತ್ತಿರುವಂತಹುಗಳನ್ನು ಶೋಧಿಸುವುದು ಅತಿ ಕಷ್ಟಕರವಾದ ಕೆಲಸವಾಗುತ್ತಿದೆ. ಇತ್ತೀಚೆಗೆ ರಷ್ಯಾದ ಭಾಷೆಯ ಲಿಪಿಗಳನ್ನು ಬಳಸಿ ಇಂಗ್ಲೀಷ್ ಭಾಷೆಯನ್ನು ಗೌಪ್ಯವಾಗಿಡುವುದು ಹೊಸ ಮಾದರಿಯ ಇ-ಮೇಲ್ ಸ್ಪ್ಯಾಮಿಂಗ್ ಆಗಿವೆ. ಆದರೆ, ಇದೇ ಮಾದರಿಯ ಫಿಷಿಂಗ್ ಇ-ಮೇಲ್‌ಗಳು ಕಾನೂನು ಭಾಹಿರವಾದ ಕೃತ್ಯವನ್ನು ಎಸಗುವಂತಹವು, ಇಂತಹ ಫಿಷಿಂಗ್ ಇ-ಮೇಲ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಗಳ ಸೋರಿಕೆಗೆ ಕೈಹಾಕುತ್ತವೆ ಉದಾ: ಬಳಕೆದಾರರ ಹೆಸರು, ಪಾಸ್‌ವರ್ಡ್, ಕ್ರೇಡಿಟ್ ಕಾರ್ಡ್ ಮಾಹಿತಿ, ಅಕೌಂಟ್ ಮಾಹಿತಿಗಳು ಇತ್ಯಾದಿ.

ಇ. ದೋಷಪೂರ್ಣ ಇಮೇಲ್‌ಗಳು : ಸಾಮಾನ್ಯವಾಗಿ ಇಂತಹ ಇ-ಮೇಲ್‌ಗಳಲ್ಲಿ ವೈರಸ್‌ಗಳನ್ನು ಅಥವಾ ಟ್ರೊಜನ್‌ಗಳನ್ನು ಲಗತ್ತಿಸಲಾಗಿರುತ್ತದೆ ಅಥವಾ ಇತರೇ ವೆಬ್ ತಾಣಗಳಿಗೆ ದುರುದ್ದೇಶ ಕೋಡ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ಸಂಪರ್ಕ ಪಡೆಯಲು ಆಹ್ವಾನಿಸುವುದು.

ಈ. ಇನ್ನೂ ಹಲವು ರೀತಿಯ ಇ-ಮೇಲ್‌ಗಳು ಅಂದರೆ, ಪದೇ-ಪದೇ ಪುನಾರವರ್ತಿಯಾಗಿ ಸ್ವೀಕರಿಸುವ ಇ-ಮೇಲ್ ಬಾಂಬಿಂಗ್‌ಗಳು, ಇತ್ತೀಚಿನ ಸಂಸತ್ತಿನ ಮೇಲೆ ನೆಡೆದ ದಾಳಿ ಪ್ರಕರಣದಲ್ಲು ಬಳಸಿಕೊಳ್ಳಲಾಗಿದ್ದ ಭಯೋತ್ವಾದಕ ಇ-ಮೇಲ್‌ಗಳು, ಇನ್ನೋಬ್ಬರ ಮಾನಕ್ಕೆ ಧಕ್ಕೆ ತರುವ ಮಾನಹಾನಿಕಾರ ಇ-ಮೇಲ್‌ಗಳು, ಕೆಲಸದ ಆಮಿಷವೋಡ್ಡುವ ಅಥವಾ ಲಾಟರಿ ವಿಜೇತರೆಂದು ಘೋಷಿಸಿ ಅಕ್ರಮ ರೀತಿಯಿಂದ ಹಣ ವಂಚಿಸಲು ಬಲಸುವ ಮೋಸಗಾರಿಕೆಯ ಇ-ಮೇಲ್‌ಗಳು, ಕೃತಕ ಇ-ಮೇಲ್ ಐಡಿಗಳನ್ನು ಸೃಷ್ಟಿಸಿ ಅಥವಾ ಮತ್ತೊಬ್ಬರ ಇ-ಮೇಲ್ ಐಡಿಗಳನ್ನು ಬಳಸಿ ವಂಚಿಸಲು ಪ್ರಯತ್ನಿಸುವುದು ಇತ್ಯಾದಿ.

ಆದ್ದರಿಂದ, ಸೈಬರ್ ಅಪರಾಧ ಎಸಗಲು ಇ-ಮೇಲ್ ಒಂದು ಸಾಮಾನ್ಯ ಅಸ್ತ್ರವಾಗಿದ್ದು ಇದರ ಬಗ್ಗೆ ಎಚ್ಚರಗೊಳ್ಳದಿದ್ದರೆ ಹೆಚ್ಚು ಪರಿಣಾಮ ಬೀರುವಂತಹದಾಗಿದೆ. ನಮಗೆ ಯಾವಾಗಲು ಲಭ್ಯವಿರುವ ಯಾಹೂ ಅಥವಾ ಜಿಮೇಲ್ ಇತ್ಯಾದಿ ಸೊಷಿಯಲ್ ನೆಟ್‌ವರ್ಕ್‌ಗಳಲ್ಲಿ ಸಂಪರ್ಕ ಹೊಂದಲು ಬಳಸುವ ಮುಕ್ತ ಇ-ಮೇಲ್ ಸೇವೆಗಳನ್ನು ಬಹಳ ಜಾಗರೂಕತೆಯಿಂದ ಬಳಸಬೇಕಾಗುತ್ತದೆ. ಇದನ್ನು ದುರ್ಬಳಕೆ ಮಾಡಿಕೊಂಡಾಗ ಸೈಬರ್ ಅಪರಾಧಕ್ಕೆ ಗುರಿಯಾಗಬೇಕಾಗುತ್ತದೆ. ಉದಾ: ಇತ್ತೀಚೆಗೆ ನಮ್ಮ ಉಡುಪಿ ಜಿಲ್ಲೆಯ ಯುವಕನೊಬ್ಬ ಮಾಜಿ ರಾಷ್ಟ್ರಪತಿ ಮಾನ್ಯ ಅಬ್ದುಲ್ ಕಲಾಮ್‌ರವರ ಹೆಸರಿನಲ್ಲಿ ಇ-ಮೇಲ್ ಐಡಿ apj_abdul_kalam@in.com ಎಂದು ಸೃಷ್ಟಿಸಿದ್ದಲ್ಲದೆ ಬೇರೆಯವರಿಗೆ ನಂಬಿಕೆ ಬರುವಂತೆ ಸಂಭಾಷಿಸಿ ವ್ಯವಹರಿಸಿದ್ದಕ್ಕಾಗಿ ಇಂದು ಪೋಲಿಸರ ಅತಿಥ್ಯಕ್ಕೆ ಒಳಗಾಗಿದ್ದಾನೆ. ಇದೇ ರೀತಿಯಲ್ಲಿ ಪುಣೆಯಲ್ಲಿ 21 ವರ್ಷದ ಬಾಲಕನೊಬ್ಬ ಭಯೋತ್ವಾದನಾ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿ ಪೋಲಿಸರಿಗೆ ಸಿಕ್ಕಿ ಹಾಕಿಕೊಂಡಾಗ ತನ್ನ ಹುಡುಗಾಟಿಕೆಯನ್ನು ಒಪ್ಪಿಕೊಂಡಿದ್ದಾನೆ.

ಕಾನೂನುನಿನ ಚೌಕಟ್ಟಿನಲ್ಲಿ ಇಂತಹ ಸೈಬರ್ ಅಪರಾಧಗಳನ್ನು ತಪಾಸಣೆ ಮಾಡಿ ಸಾಕ್ಷ್ಯ ಋಜುವಾತುಪಡಿಸಬೇಕಾದರೆ ಆ ಇ-ಮೇಲ್‌ನ ಸೃಷ್ಟಿಸಲು ಸಹಾಯವಾದ ಅಂತರ್ಜಾಲ ಸೇವಾ ಸಂಪರ್ಕ ಸಂಸ್ಥೆ ಅದರ ಚಿನ್ಹೆ, ದಿನಾಂಕ, ವಿಳಾಸ, ತಯಾರಿಸಲು ಬಳಸಿದ ಕಂಪ್ಯೂಟರ್ ಮತ್ತು ಇದರ ಐಪಿ ವಿಳಾಸಗಳ ಆಧಾರಗಳೇ ನಿರ್ಣಾಯಕಗಳಾಗಿರುತ್ತವೆ. ಒಂದು ವೇಳೆ ಇದು ನಕಲಿ ಇ-ಮೇಲ್ ಆಗಿದ್ದರೆ ಆ ಸಮಯದಲ್ಲಿ ಆ ಕಂಪ್ಯೂಟರನ್ನು ಬಳಸಿದ್ದವರು ಯಾರು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಆದರೆ ಇಂತಹ ಕೃತ್ಯಗಳನ್ನು ಯಾರೇ ವ್ಯಕ್ತಿಯು ಭಾರತದ ಹೊರಗೆ ಮಾಡಿದರೆ ಅಂತಹ ಸಮಯದಲ್ಲಿ ಸಂಬಂಧಪಟ್ಟ ದೇಶಗಳೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಆಧರಿಸಿರುತ್ತದೆ. ಆದರೂ ಈ ಭವಿಷ್ಯದಲ್ಲಿ ಈ ಇ-ಮೇಲ್‌ಗಳ ಮೇಲಿನ ತಪಾಸಣೆ ಹೊಸ ಸವಾಲನ್ನು ನೀಡುತ್ತಿವೆ. ಉದಾ: ಸ್ವಲ್ಪ ದಿನಗಳನ್ನು ಕಳೆದ ನಂತರ ಮಾಹಿತಿಯನ್ನು ನಾಶಗೊಳಿಸಿದ್ದರೆ ಅಥವಾ ಅಲ್-ಖೈದಾ ಭಯೋತ್ವಾದನಾ ತಂಡದವರು ಬಳಸುತ್ತಿದ್ದ ಡೆಡ್ ಲೆಟರ್ ಬಾಕ್ಸ್ ಪದ್ದತಿ (ಈ ಪದ್ದತಿಯಲ್ಲಿ ಒಂದು ಇ-ಮೇಲ್ ವಿಳಾಸವನ್ನು ಸೃಷ್ಟಿ ಮಾಡಿ ಅದರ ಪಾಸ್‌ವರ್ಡ್‌ನ್ನು ಹಲವು ಜನರು ಬಳಸುವುದು. ಇದರಲ್ಲಿ ಯಾವುದೇ ಮಾಹಿತಿ ತಿಳಿಸಬೇಕಾದರೆ ಇದರಲ್ಲೇ ಮಾಹಿತಿಯನ್ನು ಬರೆದು ರಕ್ಷಿಸಿರುತ್ತಾರೆ ಮತ್ತು ಪ್ರಪಂಚದಲ್ಲಿ ಎಲ್ಲಿ ಬೇಕಾದರು ಇದೇ ಇ-ಮೇಲ್ ತೆರೆದು ಮಾಹಿತಿಯನ್ನು ಓದಿಕೊಳ್ಳುವುದು ಇಲ್ಲಿ ಯಾವುದೇ ಇ-ಮೇಲ್ ರವಾನಿಸುವುದಿಲ್ಲ) ಹೀಗೆ ಇನ್ನೂ ಹೊಸ ಅವಿಷ್ಕಾರಗಳು ಸಾಮಾನ್ಯ ಮನುಷ್ಯನಿಗೆ ದೊಡ್ಡ ಪರಿಣಾಮ ಬೀರುವಿದರಲ್ಲಿ ಸಂದೇಹವೇ ಇಲ್ಲ.

ಈ ಇ-ಮೇಲ್ ಮುಖಾಂತರ ಮಾಡುವ ಕಿಡಿಗೇಡಿತನಕ್ಕೆ ಮಾಹಿತಿ ತಂತ್ರಜ್ಞಾನ ಅಧಿನಿಯಮದ-2008ರ ಕಲಮು 66(ಸಿ)ಯಲ್ಲಿ ವಿವರಿಸಿರುವ ವೈಯಕ್ತಿಕ ಮಾಹಿತಿಯ ಅಪಹರಣ ಮಾಡಿದಕ್ಕಾಗಿ ಮತ್ತು ಕಲಮು 66 (ಡಿ)ರ ಅಡಿಯಲ್ಲಿ ಕಂಪ್ಯೂಟರ್ ಸಂಪನ್ಮೂಲಗಳ ಮೂಲಕ ಮೋಸಗೊಳಿಸುವ ಕೃತ್ಯಕ್ಕೆ ಗುರಿಯಾಗಿಸಿ ಮೂರು ವರ್ಷಗಳ ಅವಧಿಯ ಕಾರಾವಾಸದಿಂದ ಅಥವಾ ಒಂದು ಲಕ್ಷ ರೂ.ಗಳವರೆಗಿನ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡನೆ ಒಳಪಡಿಸಬಹುದು.

ಆದ್ದರಿಂದ ನೀವು ಯಾವುದೇ ಇ-ಮೇಲ್ ನಿಮಗೆ ಗೊತ್ತಿರುವ ವ್ಯಕ್ತಿಯಿಂದ ಸ್ವೀಕರಿಸಿದ್ದು ಆದರೆ ಆತನ ಇ-ಮೇಲ್ ವಿಳಾಸ ಅನುಮಾನಾಸ್ಪದವಾಗಿದ್ದರೆ ಅಂತಹ ಇ-ಮೇಲ್ ಗಳ ಬಗ್ಗೆ ಜಾಗರೂಕತೆಯಿಂದ ನಿರ್ವಹಿಸಿ ಮತ್ತು ಸೈಬರ್ ತಾಣಗಳಲ್ಲಿ ನಿಮ್ಮ ಇ-ಮೇಲ್ ಬಳಕೆ ಬಹಳ ಎಚ್ಚರಿಕೆಯಿಂದಿರಲಿ, ಸ್ವಲ್ಪ ಮೈಮರೆತರು ಭಾರಿ ಬೆಲೆ ತೆತ್ತಬೇಕಾಗುತ್ತದೆ.

ಮೂಲ: ದಟ್ಸ್ ಕನ್ನಡ

Monday, June 29, 2009

ಮೈಸೂರ್ ಟ್ರಿಪ್ --> ಕೃಷ್ಣನ ಮದುವೆ

ಗೆಳೆಯರೇ/ಗೆಳತಿಯರೆ,


ನಾವೆಲ್ಲಾ ಕೃಷ್ಣನ ಮದುವೆಗೆ ದಿ:೨೭ ರಂದು ಹೊರಟು ೨೮ ವಾಪಸ್ ಬಂದ ಬಗ್ಗೆ ಒಂದು ಸಣ್ಣ ಲೇಖನವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ . ಓದಿ ಆನಂದಿಸಿ, ನಿಮ್ಮ ಅಭಿಪ್ರಾಯ ಬರೆಯಿರಿ .


೨೭ರ ಬೆಳಗ್ಗೆ ಸರಿ ಸುಮಾರು ೬.೩೦ಕ್ಕೆ ಉಮೇಶ್ ಅವರಿಂದ ದೂರವಾಣಿ ಕರೆ ಬಂತು. ಇವರು ಹೇಳಿದ ಪ್ರಕಾರ ನಾನು ಡ್ರೆಸ್ ಮಾಡಿಕೊಂಡು ೮ ಗಂಟೆಗೆ ನಾಯಂದನಹಳ್ಳಿ ಬಳಿ ಕಾಯುವುದು ಎಂದು ತಿಳಿಸಿದರು. ನಾನು ಇವರ ಕರೆಗೆ ಓಗೊಟ್ಟು ಅಲ್ಲಿ ೮.೧೫ ಕ್ಕೆ ಸೇರಿದೆ. ಆದರೇ ಇವರು ಬರಲೇ ಇಲ್ಲ . ನಾನು ಅಲ್ಲೇ ಒಂದು ಗಂಟೆ ಕಾಲ ಕಾದ ಮೇಲೆ ಇವರು ವಾಗನ್ ಆರ್ ಕಾರಿನಲ್ಲಿ ಬಂದರು. ನಾನು(ರವಿ ಎನ್ ರಾವ್ ), ಉಮೇಶ್, ಸುರೇಂದ್ರ ಮತ್ತು ಪ್ರಸನ್ನ ವಾಗನ್ ಆರ್ ಕಾರಿನಲ್ಲಿ ಮೈಸೂರ್ ಟ್ರಿಪ್ ಗೆ ಹೊರಟೆವು. ಮುಂಚೆಯೇ ತೀರ್ಮಾನದಂತೆ ಮತ್ತೊಬ್ಬ ಕೃಷ್ಣ ನು ನಮ್ಮ ಜೊತೆ ಬರಬೇಕಿತ್ತು. ಆದರೇ ಕೆಲವು ಕಾರಣಗಳಿಂದ ಅವನು ನಮ್ಮ ಜೊತೆ ಬರಲಿಲ್ಲ. ಈ ವಿಷಯವನ್ನು ಅವನು ನಮಗೆ ಎಸ್.ಎಂ.ಎಸ್ ಮೂಲಕ ತಿಳಿಸಿದ. ಅಲ್ಲಿಂದ ೯ಕ್ಕೆ ಹೊರಟ ನಾವು ಜಾನಪದ ಲೋಕದ ಪಕ್ಕದಲ್ಲಿರುವ ಕಾಮತ್ ಉಪಚಾರ ನಲ್ಲಿ ಉಪಹಾರ ಮಾಡಲು ನಿಲ್ಲಿಸಿದೆವು. ಅಲ್ಲಿ ನಾವು ಕೇಸರಿ ಬಾತ್, ಇಡ್ಲಿ ವಡೆ, ಟೊಮ್ಯಟೊ ದೋಸೆ, ಈರುಳ್ಳಿ ದೋಸೆ, ಮದ್ದೂರ್ ವಡೆ ಮತ್ತು ಅಕ್ಕಿ ರೊಟ್ಟಿ ಆರ್ಡರ್ ಮಾಡಿದೆವು. ಕೇಸರಿ ಬಾತ್ ಮತ್ತು ಅಕ್ಕಿ ರೊಟ್ಟಿ ಕ್ಷಣದಲ್ಲೇ ತಂದು ಕೊಟ್ಟ. ಸ್ವಲ್ಪ ಸಮಯದಲ್ಲೇ ಅದನ್ನು ನಾವೆಲ್ಲ ತಿಂದು ಮುಗಿಸಿದೆವು. ಆನಂತರ ಬಂದು ಹೇಳುತ್ತಾನೆ ಇಡ್ಲಿ ವಡೆ ಮುಗಿದಿದೆ ಅಂತ. ಮತ್ತೆ ನಾವು ಮಸಾಲೆ ದೋಸೆ ಆರ್ಡರ್ ಮಾಡಿದೆವು. ಈಗ ಸುರೇಂದ್ರ ಅವರ ಈರುಳ್ಳಿ ದೋಸೆ, ಉಮೇಶ ಅವರ ಟೊಮ್ಯಟೊ ದೋಸೆ ಬಂತು. ಈರುಳ್ಳಿ ದೋಸೆ ಚೆನ್ನಾಗಿ ಇತ್ತು. ಆದರೇ, ಟೊಮ್ಯಟೊ ದೋಸೆನೆ ನೋಡಿ ವಿಶೇಷ. ಇದು ಖಾಲಿ ದೋಸೆಯ ಮೇಲೆ ಟೊಮ್ಯಟೊ ಕತ್ತರಿಸಿ, ಬೇಯಿಸಿ ಕೊಟ್ಟ ದೋಸೆ ಆಗಿತ್ತು. ನಂತರ ಪ್ರಸನ್ನ ಅವರ ಮಸಾಲೆ ದೋಸೆ ಬಂತು. ಇದರಲ್ಲೂ ವಿಶೇಷವಿತ್ತು. ಪ್ಲೈನ್ ದೋಸೆಯ ಒಳಗೆ ಆಲೂ ಪಲ್ಯ, ಇದುವೇ ನಮ್ಮ ಮಸಾಲೆ ಇಲ್ಲದ ದೋಸೆ. ನಂತರ ಉಮೇಶ್ ಅವರಿಂದ ಮತ್ತೊಂದು ಪ್ಲೈನ್ ದೋಸೆ ಆರ್ಡರ್. ಇದು ಬಹಳ ಬೇಗ ಬಂತು. ನಂತರ ೨ ರಲ್ಲಿ ೪ ಕಾಫಿ ಹೀರಿ, ಇಲ್ಲಿಂದ ಹೊರಟಾಗ ಸಮಯ ೧೧.೩೦ ಆಗಿತ್ತು . ಕಾಮತ್ ಉಪಚಾರದಲ್ಲಿ, ಕೆಲವು ಹುದುಯಿರನ್ನು ಕಂಡು ನಮ್ಮ ಕಣ್ಣು ತಂಪು ಮಾಡಿಕೊಂಡೆವು ಎಂಬುದನ್ನು ಬಿಟ್ಟರೆ, ಬೇರೆಯಲ್ಲ ಸೊನ್ನೆ. ಇಲ್ಲಿಂದ ಹೊರಟ ನಮ್ಮ ಪಯಣ ಶ್ರೀ ರಂಗ ಪಟ್ಟಣದ ಸಂಗಯದಲ್ಲಿ ಸ್ತಗಿತ. ಇಲ್ಲಿ ಏನು ಇಲ್ಲ, ಆದರೂ ಸುಮ್ಮನೆ ಇಳಿದು ಸ್ವಲ್ಪ ವಾಯು ವಿಹಾರ ಮಾಡಿದೆವು. ಮತ್ತೆ, ತಿಪುಉವಿನ ಬೇಸಿಗೆ ಅರಮನೆ ನೋಡಲು ಹೊರಟೆವು. ಇಲ್ಲಿ ಕೆಲವು ಛಾಯಾ ಚಿತ್ರಗಳನ್ನು ತೆಗೆದು, ಟಿಪ್ಪುವಿನ ವಸ್ತು ಸಂಗ್ರಹಾಲಯ ವೀಕ್ಷಣೆ. ಮುಂದೆ ರಂಗನಾಥ ದೇವಸ್ತಾನ ನೋಡಲು ಹೊರಟೆವು. ಆದರೆ, ಅದಾಗಲೇ ಸಮಯ ೨ ಗಂಟೆ ದಾಟಿತ್ತು. ದೇವಸ್ತಾನ ಮುಚ್ಚಿತ್ತು. ಇಲ್ಲಿ ಒಂದು ತರಹನಾದ ಹುಲಿ ದ್ರಾಕ್ಷಿ ಮತ್ತು ಮಾವಿನ ಕಾಯಿ, ಮೆಣಸಿನ ಪುಡಿ ಜೊತೆ ತಿಂದಾಗ ಬಾಯಲ್ಲಿ ರಸ ಸುರಿಯುತ್ತಿತ್ತು. ಇದು ತುಂಬಾ ಚೆನ್ನಾಗಿತ್ತು ಅಂಥ ಬೇರೆ ಹೇಳಬೇಕಾ. ಇಲ್ಲಿಂದ ರಂಗನ ತಿಟ್ಟು ಪಕ್ಷಿ ಧಾಮದ ಕೆಡೆ ಹೊರಟೆವು. ಬಹಳ ಪಕ್ಷಿಗಲೇನು ಇರಲಿಲ್ಲ. ಇಲ್ಲಿ ಕೂಡ ಸುಮ್ಮನೆ ಛಾಯಾ ಚಿತ್ರಗಳನ್ನು ತೆಗೆದುಕೊಂಡೆವು. ಇಲ್ಲಿಂದ ನಾವು ಬೃಂದಾವನ ಗಾರ್ಡನ್ ಕಡೆಗೆ ಹೊರಟೆವು. ಮಾರ್ಗ ಮದ್ಯದಲ್ಲಿ ಆಶಾ ದಾಬಾ ನಲ್ಲಿ ಊಟಕ್ಕೆಂದು ನಿಲ್ಲಿಸಿದೆವು. ಇಲ್ಲಿ ರೋಟಿ, ಪನ್ನೀರ್ ಬಟರ್ ಮಸಾಲ ಮತ್ತು ಸುರೇಂದ್ರ ಅವರ ಮುಖ್ಯ ಖಾದ್ಯ ದಾಲ್ ಫ್ರೈ ಆರ್ಡರ್ ಮಾಡಿದೆವು.( ೪+೪ ರೋಟಿ ) . ಮತ್ತೆ ಜೀರಾ ಫ್ರೈಡ್ ರೈಸ್ ತಿಂದೆವು. ಇಲ್ಲಿ ಎಲ್ಲ ಖಾದ್ಯಗಳು ತುಂಬಾ ಚೆನ್ನಾಗಿತ್ತು. ಸರಿ ಸುಮಾರು ೪ ಗಂಟೆಗೆ ಕೆ.ಅರ್.ಎಸ ತಲುಪಿದೆವು. ಇಲ್ಲಿ ಕೆ.ಅರ್.ಎಸ ಅಣೆಕಟ್ಟಿನ ಸೇತುವೆಯ ಮೇಲೆ ಬಿಡಲಿಲ್ಲ. ಆದರೂ ಬೃಂದಾವನ ತೋಟದ ವೀಕ್ಷಣೆ, ಛಾಯಾ ಚಿತ್ರ ತೆಗೆಯುವುದು, ೬.೩೦ ರ ವರೆಗೆ ನಡೆಯಿತು. ಇಲ್ಲಿಂದ ಮೈಸೂರ್ ಅರಮನೆ ಕಡೆಗೆ ಪಯಣ ಮುಂದುವರೆಯಿತು. ಇಲ್ಲಿ ದೀಪಗಳಿಂದ ಕಂಗೊಲೆಯುತ್ತಿದ್ದ ಅರಮನೆಯಾ ಛಾಯಾ ಚಿತ್ರಗಳನ್ನು ಮಾತ್ರ ತೆಗೆದು ಕೊಳ್ಳಲು ಸಾದ್ಯವಾಯಿತು. ೭.೩೦ ಕ್ಕೆ (ನಾವು ಹೊರಟ ೧೦ ನಿಮಿಷಗಳ ನಂತರ ) ಲೈಟ್ ಕೂಡ ಆರಿಸಿದರು. ಇಲ್ಲಿಗೆ ನಮ್ಮ ಪ್ರವಾಸದ ಮೊದಲ ದಿನ ಮುಗಿಯಿತು. ಇಲ್ಲಿಂದ ನಾವು ಉಮೇಶನ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳಲು ಹೊರಟೆವು. ಬೋಗಾವಿ ಎರಡನೇ ಹಂತದ, ಪ್ರದೀಪನ ಮನೆಗೆ ಅಂತು ಇಂತು ಬಹಳ ಪ್ರಯಾಸ ಪಟ್ಟು ಸೇರಿದೆವು. ಇಲ್ಲಿಗೆ ಸೇರಲು ಬಹಳಷ್ಟು ದೂರವಾಣಿ ಕರೆಗಳನ್ನು ಮಾಡಿದೆವು ಎಂಬುದನ್ನು ತಿಳಿಸುತ್ತೇನೆ. ಇಲ್ಲಿ ನಮ್ಮನ್ನು ಇಳಿಸಿ ಉಮೇಶ್ ಮತ್ತು ಅವನ ಸ್ನೇಹಿತ ಪ್ರದೀಪ್ ಊಟ ಪಾರ್ಸೆಲ್ ತರಲು ಪ್ರದೀಪನ ವಾಹನ ದಲ್ಲಿ ಹೊರಟರು. ಮತ್ತೆ ಅದೇ ರೊಟ್ಟಿ ಮತ್ತು ಫ್ರೈಡ್ ರೈಸ್ ಊಟ ಮಾಡಿ ಮಲಗಿದಾಗ ೧೧ ಗಂಟೆಯಾಗಿತ್ತು.


ಎರಡನೇ ದಿನ ೨೮ ರಂದು ಬೆಳಗ್ಗೆ ೬ ಗಂಟೆಗೆ ಎದ್ದೆವು. ಉಮೇಶನಿಗೆ ಬ್ಬಿಸಿ ನೀರಿನಲ್ಲಿ ಸ್ನಾನ ಮಾಡಿ ಅಭ್ಯಾಸ. ಇದನ್ನೇ ಅವನು ಪ್ರದೀಪನ ಮುಂದಿಟ್ಟ. ಇಲ್ಲಿ ಎಲಕ್ಟ್ರಿಕ್ ಕಾಯಿಲ್ ಇರಲಿಲ್ಲ, ಆದರೆ ಗ್ಯಾಸ್ ಇತ್ತು. ಅದರ ಮೇಲೆ ನೀರನ್ನು ಕಾಯಿಸಿ ಸ್ನಾನ ಮಾಡಿದೆವು. ನನಗೆ ತಣ್ಣೀರು ಸ್ನಾನ ಮಾಡಿ ಅಬ್ಯಾಸ ಇತ್ತು. ಆದ್ದರಿಂದ, ನಾನು ತಣ್ಣೀರಿನಲ್ಲೇ ಸ್ನಾನ ಮಾಡಿದೆ. ನಂತರ, ಎಲ್ಲರೂ ಸ್ನಾನ ಮಾಡಿ, ಚಾಮುಂಡಿ ಬೆಟ್ಟದ ಕೆಡೆಗೆ ಹೊರಟಾಗ ಸಮಯ ೮ ಗಂಟೆಯಾಗಿತ್ತು. ಅಲ್ಲಿ ಚಾಮುಂಡೆಶ್ವರಿಯ ದರ್ಶನ ನಾವು ಪಡೆಯಲಿಲ್ಲ. ಭಾರಿ ಜನ ಸಂದಣಿ ಇರುವುದರಿಂದ ನಾವು ಹೊರಗಡೆಯಿಂದ ಚಾಮುಂಡೆಶ್ವರಿಯ ಆಶೀರ್ವಾದ ಪಡೆದು, ದೊಡ್ಡ ಬಸವಣ್ಣನನ್ನು ನೋಡಲು ಹೊರಟೆವು. ಇಲ್ಲಿ ಬಸವಣ್ಣನ ಛಾಯಾ ಚಿತ್ರಗಳನ್ನು ತೆಗೆದು ಕೊಂಡು ಮೈಸೂರಿನ ಕಡೆ ಪಯಣ ನಡೆಸಿದೆವು. ಬೆಟ್ಟ ಇಳಿಯುವಾಗ ಒಂದು ಮಹಿಳೆ ಮತ್ತು ಅವನ ತಮ್ಮ ಸ್ಕೂಟರ್ ನಿಂದ ಬಿದ್ದಿದ್ದರು. ನಮ್ಮ ಮುಂದಿನ ಕಾರಿನಲ್ಲಿ ಹೋಗುತ್ತಿದ್ದ ಮಂದಿ, ಅವರಿಹೆ ಸಹಾಯ ಮಾಡುತ್ತಿದ್ದರು. ಆದ್ದರಿಂದ ನಾವು ಮದುವೆಯಕಡೆಗೆ ನಮ್ಮ ಪಯಣ ಮುಂದುವರೆಸಿದೆವು. ಕಲ್ಯಾಣ ಮಂಟಪ ಇರುವ ಜಾಗ ಪ್ರದೀಪನಿಗೆ ಗೊತ್ತಿತ್ತು. ಆದರಿಂದ ನಾವು ಪ್ರಯಾಸವಿಲ್ಲದೆ ಅಲ್ಲಿಗೆ ಸೇರಿದೆವು. ಅಲ್ಲಿಗೆ ಈಗಾಗಲೇ ನಮ್ಮ ಮತ್ತೊಬ್ಬ ಸ್ನೇಹಿತ ರಘುನಂದನ್ ಆಗಮಿಸಿದ್ದರು. ನಾವೆಲ್ಲರೂ ಮೊದಲು ಉಪಹಾರ ಸೇವಿಸಲು ಹೊರಟೆವು. ಆಹಾ !!! ಇಲ್ಲಿ ಬಾಯಲ್ಲಿ ನೀರೂರಿಸುವ ಬೂದು ಕುಂಬಳ ಹಲ್ವ ಮತ್ತು ಪೊಂಗಲ್ ಮಾಡಿದ್ದರು. ಇದನ್ನು ನಾವು ಸೇವಿಸಿದೆವು. ಪೊಂಗಲ್ ಎರಡನೇ ಬಾರಿ ಕೇಳಿದರು, ಆದರೆ ಹಲ್ವ ಕೇಳಲಿಲ್ಲ. ಈಗ ಮದುವೆ ಮನೆಯ ಒಳಗೆ ಹೋಗಿ, ಕೃಷ್ಣನ ನ್ನು ಮಾತಾಡಿಸಿ, ಛಾಯಾ ಚಿತ್ರ ತೆಗೆದು ಕೊಂಡೆವು. ಮತ್ತೆ ಹೂಗೊಂಚಲು ತರಲು ಹತ್ತಿರವೆಲ್ಲ ಓ ಡಾಡಿದೆವು . ಎಲ್ಲೂ ಸಿಗಲಿಲ್ಲ, ಮುಹೂರ್ತದ ಸಮಯ ವಾದ್ದರಿಂದ ವಾಪಸ್ ಬಂದೆವು. ಮದುವೆಯ ಮಂಟಪದಲ್ಲಿ ಮಾಡುವೆ ನಡೆಯಲಿಲ್ಲ. ಬದಲಾಗಿಕೋಣೆಯ ಮತ್ತೊಂದು ಭಾಗದಲ್ಲಿ ನಡೆಯಿತು. ಇಲ್ಲಿ ಸುಮ್ಮನೆ ಕುಳಿತು ಕುಳಿತು ಬೇಜಾರಾಯಿತೆ ವಿನಃ, ನಮಗೆ ಮದುವೆಯ ಮೇಲೆ ಆಸಕ್ತಿ ಹೋಯಿತು. ಮತ್ತೆ ೧೨.೩೦ ಕ್ಕೆ ಊಟದ ಮನೆಗೆ ಹೊರಟೆವು. ಊಟ ತುಂಬ ಚೆನ್ನಾಗಿತ್ತು, ಅನ್ನ, ರಸ, ಹುಳಿ, ಮೈಸೂರಿನ ಪ್ರಸಿದ್ಧ ತಿನಿಸು ಮೈಸೂರ್ ಪಾಕ್, ಜಿಲೇಬಿ, ಹಪ್ಪಳ, ಸಂಡಿಗೆ ಮುಂತಾದ ಖಾಧ್ಯಗಳಿಂದ ತುಂಬ ರುಚಿಕರವಾಗಿತ್ತು. ಊಟ ದ ವಿಶೇಷ ವೆಂದರೆ ಇಲ್ಲಿ ಎಲ್ಲರಿಗೂ ೨ ರೂ ನಾಣ್ಯ ವನ್ನು ಕೊಟ್ಟರು. ಊಟ ಮುಗಿಸಿ , ಕೃಷ್ಣನಿಗೆ ಉಡುಗೊರೆ ರಶೀತಿಯನ್ನು ಕೊಟ್ಟು, ಅವನಿಗೆ ಶುಭಾಶಯ ಹೇಳಿದೆವು. ಇಲ್ಲಿಂದ ಬೆಂಗಳೂರಿನ ಕಡೆ ಹೊರಡಲು ಅಣಿಯಾದೆವು. ದಂಪತಿಗಳ ಛಾಯಾ ಚಿತ್ರ ಒಂದನ್ನು ನಾವು ತೆಗೆದು ಕೊಂಡಿಲ್ಲವಾದ್ದರಿಂದ, ನಾನು ಒಬ್ಬನೇ ಮತ್ತೆ ಒಳಗೆ ಹೋದೆನು. ಈಗ ಇಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು. ಈಗಲೇ ಕ್ರಿಷ್ಣನವರಿಂದ ಶ್ವೇಥಳಿಗೆ ಮಾಂಗಲ್ಯ ಭಾಗ್ಯ ನಡೆಯಿತು, ಅರ್ಥಾತ್ ಮದುವೆಯ ಮುಖ್ಯ ಭಾಗ. ಇದರ ಛಾಯಾ ಚಿತ್ರ ಗಳನ್ನು ತೆಗೆದು ಕೊಂಡೆನು. ಇಲ್ಲಿಂದ ಹೊರಗೆ ಬಂದು,೧.೩೦ ಕ್ಕೆ ಬೆಂಗಳೂರಿನ ಕಡೆ ಪ್ರಯಾಣ ನಡೆಸಿದೆವು. ಮಾರ್ಗ ಮದ್ಯೆ ಪ್ರದೀಪ್ ಇಳಿದು ಕೊಂಡನು, ಮತ್ತು ರಘು ನಮ್ಮ ಜೊತೆ ಸೇರಿಕೊಂಡನು. ಇಲ್ಲಿಂದ ಹೊರಟ ನಾವು, ರಾಮನಗರ ದ ಹತ್ತಿರ ಹಣ್ಣಿನ ರಸ ಕುಡಿಯಲು ನಿಲ್ಲಿಸಿದೆವು. ಅಲ್ಲಿ ಹಣ್ಣಿನ ರಸ ಕುಡಿದ ನಂತರ ೪.೩೦ ಕ್ಕೆ ಹೊರಟು ನಾಯಂದನ ಹಳ್ಳಿ ಸೇರಿದೆವು. ಇಲ್ಲಿ ರಘು ಮತ್ತು ನಾನು ಇಳಿದು ಕೊಂಡೆವು. ಉಮೇಶ್, ಸುರೇಂದ್ರ ಮತ್ತು ಪ್ರಸನ್ನ ರಾಜಾಜಿ ನಗರದಲ್ಲಿ ಇಳಿದು ಕೊಂಡರು.



ನಮ್ಮನ್ನು ಹುಷಾರಾಗಿ ಕರೆದುಕೊಂಡು ಹೋಗಿ, ಹುಷಾರಾಗಿ ವಾಪಸ್ ಸೇರಿಸಿದ ಪ್ರಸನ್ನ ಅವರಿಗೆ ನನ್ನ ವಂದನೆಗಳನ್ನು ಸಲ್ಲಿಸುತ್ತ ನನ್ನ ಪ್ರಯಾಣದ ಅನುಭವವನ್ನು ಮುಗಿಸುತ್ತಿದ್ದೇನೆ .

Thursday, June 25, 2009

ಅವಿತಿರುವ ಫೋಟೋಗಳನ್ನು ಹುಡುಕಿ --> ಇಲ್ಳುಸನ್









































































































ಒಂದು ಬಾರಿ ನಕ್ಕು ಬಿಡಿ --> ನಾಣ್ಯ ಇದೆಯಾ ?

ಒಂದು ಹೆಂಗಸು @ ರೈಲ್ವೆ ನಿಲ್ದಾಣ ೧/೨ ಗಂಟೆಗಳಿಂದ ಕಾಯುತ್ತಿದ್ದಳು.
ಅವಳಿಗೆ ಬೇಜಾರಾಗಿ, ಅಲ್ಲೇ ಇರುವ ಭಾರ ತಿಳಿಸುವ ಮೆಶಿನ್ ಗೆ,
೧ ರೂ ನಾಣ್ಯ ತೆಗೆದು ಹಾಕಿದಳು --> 58.ಜಿ.
೧ ರೂ ನಾಣ್ಯ ತೆಗೆದು, ಚಪ್ಪಲಿ ತೆಗೆದಳು --> 56 ಕೆ.ಜಿ.
೧ ರೂ ನಾಣ್ಯ ತೆಗೆದು, ರೈನ್ ಕೋಟ್ ತೆಗೆದಳು --> 53 ಕೆ.ಜಿ.
೧ ರೂ ನಾಣ್ಯ ತೆಗೆದು, ದುಪ್ಪಟ ತೆಗೆದಳು --> 50 ಕೆ.ಜಿ.
ನಾಣ್ಯ ಮುಗಿಯಿತು.....
ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಭಿಕ್ಷುಕ , ನೀನು ಮುಂದುವರೆಸು, ನಾಣ್ಯ ನಾನು ಕೊಡುತ್ತೇನೆ ಎಂದ

Airtel Prepaid Worst Service

ನನ್ನ ಪ್ರೀತಿಯ ಏರ್ ಟೆಲ್ ಗ್ರಾಹಕರೇ,
I am using the Airtel prepaid connection from past 5 years.

On Saturday, 13/6/2009 one person called me up and said that, if u want to continue with the same connection, , you need to submit some documents like Address Proof and ID Proof for verification purpose. He also mentioned that, he will send a Person near my home/office premises on Monday. But, nobody turned up. Even I tried to call the same number; it was not answerable and switched off sometimes.On Wednesday, 17/06/09 by 2 PM, I received an SMS saying outgoing will be barred. I immediately called up the Airtel Customer care (121) and mentioned the same. He said that, you nee to submit the documents at any near by Airtel Relationship Centre immediately. As my office is in Whitefield, Bangalore and there is no near by Airtel centre, he told, will extend the time till Saturday or at least tomorrow morning. But, immediately after I disconnect the call with them, all my Incoming as well as Outgoing calls were barred. Even I m unable to call Cust care also.
If the SMS says outgoing will be barred then "Why Incoming is also barred". I had a meeting with US Client on the same day evening. I mailed them in the same day morning to conference me on the same number. But, all these made me not attend the meeting and many things happened in my office. And also the recorded voice message says “The Airtel Customer has barred the calls ", Is that right? Did I do barring or did Airtel done it?
Finally, on Friday I had all these discussion with the Airtel Relationship centre in Banashankari 3rd Stage, Bangalore centre and I Submitted all my supporting documents also. And, they told within 48 hours your connection will get activated. It happened Saturday, Sunday, Monday, Tuesday, Wednesday and Thursday(25/6/2009), still not done.
When called up Cust care on Monday(22/06/2009) from some other mobile they are saying Saturday and Sunday are not working Days.

If Saturday & Sunday are not working Days, what about Monday, Tuesday and Wednesday
Registered several complaints with Airtel customer care. None of them resolved.

Will they do activate my connection??? Again

ಕಂಪ್ಯೂಟರ್ ನ ಮದುವೆಯ ಆಹ್ವಾನ ಪತ್ರಿಕೆ

Friendship

ಮುನ್ನಾರ್ ಟ್ರಿಪ್









CyberCrime

ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿರುವ ಸೈಬರ್ ಕ್ರೈಂ

ಮನುಷ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ಜನಸಾಮಾನ್ಯರಿಗೆ ಅರ್ಥವಾಗದ, ಕಾನೂನಿನ ಚೌಕಟ್ಟಿಗೂ ಬಾರದಿರುವ ಅನೇಕ ಅಪರಾಧಗಳು ಹೆಚ್ಚುತ್ತಿವೆ. ಅಂಥವುಗಳಲ್ಲಿ ಸೈಬರ್ ಅಪರಾಧವೂ ಒಂದು. ಸೈಬರ್ ಅಪರಾಧವನ್ನು ಕಟ್ಟಿಹಾಕಲು ಭಾರತ ಮಾಹಿತಿ ತಂತ್ರಜ್ಞಾನ ಅಧಿನಿಯಮ 2000 ಜಾರಿತಂದಿದೆ. ಈ ಕಾನೂನಿನಿಂದ ಸೈಬರ್ ಕ್ರೈಮನ್ನು ನಿಗ್ರಹಿಸುವಲ್ಲಿ ಎಷ್ಟು ಸಫಲತೆ ದಕ್ಕಿದೆ? ಜನಸಾಮಾನ್ಯರಿಗೆ ಈ ಅಪರಾಧದ ಬಗ್ಗೆ ತಿಳಿವಳಿಕೆಯಾದರೂ ಎಷ್ಟಿದೆ? ಸೈಬರ್ ಅಪರಾಧ ವಿಷಯದಲ್ಲಿ ಪರಿಣತಿ ಹೊಂದಿರುವ ನ್ಯಾಯವಾದಿ ಪ್ರಶಾಂತ್ ಮಿರ್ಲೆ ಈ ನೂತನ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ. ಸೈಬರ್ ಅಪರಾಧ ಕುರಿತಂತೆ ಮಿರ್ಲೆ ಅವರೊಂದಿಗೆ ಓದುಗರು ಸಂವಾದಿಸಬಹುದು. - ಸಂಪಾದಕ.

ಮನುಷ್ಯ ತನ್ನ ಚಟುವಟಿಕೆಗಳಿಂದ ಎಲ್ಲಿಯವರೆಗೆ ಯಶಸ್ಸನ್ನು ಕಾಣುತ್ತಾ ಇರುತ್ತಾನೋ ಅಲ್ಲಿಯವರೆಗೆ ಅಪರಾಧಗಳು ಹೆಚ್ಚುತ್ತಲೇ ಇರುತ್ತವೆ. ಅಂತಯೇ, ಈ ಅಪರಾಧಗಳನ್ನು ನಿಯಂತ್ರಿಸುವ ಕೆಲಸ ಆಗಿಂದಾಗ್ಗೆ ಮಾಡುತ್ತಲೇ ಇರಬೇಕಾಗುತ್ತದೆ. ಇದಕ್ಕಾಗಿ ಕಾನೂನು ರಚನಾ ಇಲಾಖೆಗಳನ್ನು ಬಲಪಡಿಸಬೇಕಾಗುತ್ತದೆ ಮತ್ತು ಅಪರಾಧಗಳನ್ನು ಹಿಮ್ಮೆಟ್ಟಿಸಬೇಕಾಗುತ್ತದೆ. 1990ರ ಪೂರ್ವದಲ್ಲಿ ಸೈಬರ್ ಸ್ವೇಸನ್ನು ಸುಮಾರು ಒಂದು ಲಕ್ಷ ಜನರು ಬಳಸುತ್ತಿದ್ದರು. ಇಂದು 500 ಮಿಲಿಯನ್‌ಗಿಂತ ಹೆಚ್ಚು ಜನರು ಪ್ರಪಂಚದ ನಾನಾ ಭಾಗಗಳಿಂದ ಬಳಸುತ್ತಿದ್ದು ಒಂದು ರೀತಿ ಅನೈತಿಕ, ದಿವಾನಿ ಮತ್ತು ಅಪರಾಧಿಕ ತಪ್ಪುಗಳನ್ನು ಎಸಗುವ ತಾಣವಾಗಿರುತ್ತದೆ.

ಮಾಹಿತಿ ತಂತ್ರಜ್ಞಾನದ ವೃತ್ತಿಪರರಿಗೆ (ಸಾರ್ವಜನಿಕರಿಗೂ ಸಹ) ಸೈಬರ್ ಅಪರಾಧದ ಬಗ್ಗೆ ಯಾವಾಗ ಪೋಲಿಸರಿಗೆ ಮಾಹಿತಿಯನ್ನು ಕೊಡಬೇಕು ಅಥವಾ ಎಂತಹ ಮಾಹಿತಿಯನ್ನು ಒದಗಿಸಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕಾಗಿರುವುದು ಇಂದು ಅತಿ ಜರೂರಾಗಿದೆ. ಅಂತೆಯೇ, ಕಾನೂನು ರಚನೆಕಾರರು ಕೆಲವು ನಿರ್ದಿಷ್ಟ ಅಪರಾಧಗಳಿಗೆ ಶಿಕ್ಷಿಸಲು ಅವುಗಳನ್ನು ಕಾನೂನಿನಡಿಯಲ್ಲಿ ತರುವ ಅಗತ್ಯವಿದೆ. ವಾಸ್ತವವಾಗಿ ಕೆಲವು ಸೈಬರ್ ಅಪರಾಧಗಳು ಇನ್ನೂ ಕಾನೂನು ಪರಿಧಿಯಿಂದ ಹೊರಗುಳಿದಿದ್ದು ಸಮಾಜಕ್ಕೆ ಮಾರಕವಾಗಿವೆ.

ಪ್ರಾಥಮಿಕವಾಗಿ ಸೈಬರ್ ಅಪರಾಧ ಕುರಿತಂತೆ ಅಂತಾರಾಷ್ಟ್ರೀಯ ವ್ಯಾಪಾರ ಕಾನೂನಿನ ಸಂಯುಕ್ತ ರಾಷ್ಟ್ರಗಳ ಆಯೋಗವು ಅಂಗೀಕರಿಸಿದ ವಿದ್ಯುನ್ಮಾನ ವಾಣಿಜ್ಯ (ಇ-ಕಾಮರ್ಸ್) ಮಾದರಿ ಕಾನೂನಿನ ಅನ್ವಯ ಭಾರತವು ಮಾಹಿತಿ ತಂತ್ರಜ್ಞಾನ ಅಧಿನಿಯಮವನ್ನು 2000ನೇ ಇಸವಿಯಲ್ಲಿ ಜಾರಿಗೆ ತಂದಿದೆ. ಕಾನೂನು ಏಕರೂಪವಾಗಿರಬೇಕೆಂಬ ದೃಷ್ಟಿಯಿಂದ ಎಲ್ಲ ರಾಷ್ಟ್ರಗಳು ತಮ್ಮ ಕಾನೂನುಗಳನ್ನು ಅಧಿನಿಯಮಿಸುವಾಗ ಅಥವಾ ಅವುಗಳನ್ನು ಪರಿಷ್ಕರಿಸುವಾಗ ಸದರಿ ಮಾದರಿ ಕಾನೂನಿಗೆ ಅನುಕೂಲಕರ ಪರಿಗಣನೆ ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಭಾರತ ಸೈಬರ್ ಆಪರಾಧ ಮತ್ತು ಅವುಗಳ ನಿರ್ದಿಷ್ಟ ಪ್ರಕಾರಗಳನ್ನು ಸಂಘಟಿಸಿ ದಂಡನಾರ್ಹಗೊಳಿಸಿದೆ. ವಿದ್ಯುನ್ಮಾನ ದತ್ತಾಂಶದ ಪರಸ್ಪರ ವಿನಿಮಯ ಮತ್ತು ಇತರ ವಿದ್ಯುನ್ಮಾನ ಸಂವಹನದ ಮೂಲಕ ನಿರ್ವಹಿಸುವ ವಹಿವಾಟುಗಳಿಗೆ ಕಾನೂನಿನ ಮಾನ್ಯತೆಯನ್ನು ನೀಡಲಾಯಿತು ಮತ್ತು ಇದಕ್ಕೆ ಪೂರಕವಾಗಿ ಭಾರತ ದಂಡ ಸಂಹಿತೆ, 1860, ಭಾರತ ಸಾಕ್ಷ್ಯ ಅಧಿನಿಯಮ, 1872, ಬ್ಯಾಂಕರುಗಳ ಪುಸ್ತಕ ಸಾಕ್ಷ್ಯ ಅಧಿನಿಯಮ, 1891 ಮತ್ತು ಭಾರತದ ರಿಸರ್ವ್ ಬ್ಯಾಂಕ್ ಅಧಿನಿಯಮ, 1934 - ಸೂಕ್ತ ತಿದ್ದುಪಡಿ ಮಾಡಲಾಗಿದೆ.

ಸೈಬರ್ ಅಪರಾಧಗಳು

ಸೈಬರ್ ಅಪರಾಧಕ್ಕೆ ಮೂಲ ಕಂಪ್ಯೂಟರ್ ಮತ್ತು ಅದರ ಸಂಪನ್ಮೂಲಗಳು. ಅಪರಾಧಿಗಳು ಇಂಟರ್ನೆಟ್ ಸಂಪರ್ಕ ಪಡೆದು ಇತರರಿಗೆ ಕಂಪ್ಯೂಟರ್ ಬಳಕೆಯನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ವೈರಸ್ ಹರಡಿ ಇಡಿ ಸಂಪರ್ಕಗಳನ್ನೇ ನಾಶ ಮಾಡುತ್ತಿದ್ದಾರೆ. ಇಷ್ಟಲ್ಲದೆ, ವಿವಿಧ ರೀತಿಯಲ್ಲಿ ಅಂದರೆ, ದುರುದ್ದೇಶವುಳ್ಳ ಸಾಪ್ಟ್‌ವೇರ್‌ಗಳು(malware), ಸ್ಪ್ಯಾಮ್‌ಗಳು/ ಜಾಹಿರಾತು ಮಾದರಿಗಳು(bots), ವೈಯಕ್ತಿಕ ಮಾಹಿತಿಗಳುಳ್ಳ ಕ್ರೆಡಿಟ್ ಕಾರ್ಡ್‌ಗಳ ಅಥವಾ ಡೇಟಾಗಳನ್ನು ನಕಲಿಕರಿಸಿಕೊಳ್ಳುವುದು (phishing) ಮತ್ತು ಇನ್ನೊಬ್ಬರ ಬಗ್ಗೆ ತಪ್ಪು ಭಾವನೆ ಬರುವಂತೆ ಮಾಡುವುದು (spoofing), ಬೆದರಿಕೆಯ ಮೂಲಕ ಭಯೋತ್ವಾದನೆ ಉಂಟುಮಾಡುವುದು, ಹೀಗೆ ಹಲವು ರೂಪದಲ್ಲಿ ಜನ್ಮ ಪಡೆದುಕೊಳ್ಳುತ್ತಲೇ ಇರುತ್ತವೆ.

ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಕೆಲ ಉದಾಹರಣೆಗಳನ್ನು ನೋಡೋಣ.

ಅ. ಇಂದು ಮೋಸದ ಇ-ಮೇಲ್‌ಗಳಿಂದ ಬಾಧಿಸುವುದು ಅದರಲ್ಲೂ ಮುಖ್ಯವಾಗಿ ಹಣ ಹೊಂದುವ ಆಸೆಯಿಂದ ಹೊಸ-ಹೊಸ ಮಾದರಿಯಲ್ಲಿ ಇ-ಮೇಲ್ ಮುಖಾಂತರ ಆಕರ್ಷಕ ಚಿತ್ರಗಳನ್ನು ಕಳುಹಿಸುತ್ತಾರೆ, ಒಂದು ವೇಳೆ ಈ ಚಿತ್ರದ ಮೇಲೆ ಬಟನ್ ಒತ್ತಿದರೆ ವೈರಸ್ಸನ್ನು ಆಹ್ವಾನಿಸಿ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿದಂತೆ (ಇನ್ಸ್‌ಟಾಲ್) ನಂತರ ಇದು ನಿಮ್ಮ ಇತರೇ ಫೈಲ್‌ಗಳನ್ನು ಸ್ವಯಂಚಾಲಿತವಾಗಿ ಮುಚ್ಚುತ್ತದೆ (ಅನ್‌ಲಾಕ್) ಇದನ್ನು ಪುನಃ ತೆರೆಯಬೇಕೆಂದರೆ ಹಣ ಪಾವತಿಸುವಂತೆ ನಿರ್ದೇಶಿಸುತ್ತದೆ. ಸೂಕ್ತ ತಿಳಿವಳಿಕೆ ಇಲ್ಲದೇ ಅಂತರ್ಜಾಲದ ಅಥವಾ ಇಂಟರ್‌ನೆಟ್‌ನ್ನು ರಕ್ಷಣಾತ್ಮಕವಾಗಿ ಬಳಸದೇ ಇದ್ದ ಕಾರಣ ಇಂತಹ ಮೋಸಕ್ಕೆ ಭಾರತದಲ್ಲಿ ಹಲವುಮಂದಿ ಹಣ ವ್ಯಯಿಸಿರುವ ಪ್ರಕರಣಗಳಿವೆ.

ಆ. ಸಾಮಾನ್ಯವಾಗಿ ಬ್ಯಾಂಕುಗಳ ಹೆಸರಿನಿಂದ ವೈಯಕ್ತಿಕ ಮಾಹಿತಿಗಳನ್ನು ಕೇಳುವ ಇ-ಮೇಲ್‌ಗಳು ನಮ್ಮ ಭಾರತದಲ್ಲಿ ಹೆಚ್ಚು. ಇವುಗಳಲ್ಲಿ ಹೆಚ್ಚು ನಕಲಿ ಮತ್ತು ನ್ಯಾಯಬದ್ದವಾದ ಬ್ಯಾಂಕುಗಳು ಯಾವಾಗಲೂ ವೈಯಕ್ತಿಕ ಮಾಹಿತಿಯನ್ನು ಮೇಲ್ ಮುಖಾಂತರ ಕೇಳುವುದಿಲ್ಲ. ಇದರ ಅವಶ್ಯಕತೆ ಇದ್ದರೆ ಲಿಖಿತವಾಗಿ ಅಥವಾ ಸಾಮಾನ್ಯವಾಗಿ ದೂರವಾಣಿಯ ಮುಖಾಂತರ ಸಂಪರ್ಕಿಸುವುದುಂಟು. ಆದ್ದರಿಂದ ಇನ್ನೂ ಮುಂದೆ ಇಂತಹ ಮೇಲ್‌ಗಳು ನಿಮಗೆ ಬಂದರೆ ಅದನ್ನು ತೆರೆಯುವುದಕ್ಕಿಂತ ಮುಂಚೆ ಸಂಬಂಧಪಟ್ಟ ಬ್ಯಾಂಕುಗಳನ್ನು ಸಂಪರ್ಕಿಸಿ ಖಾತ್ರಿಪಡಿಸಿಕೊಳ್ಳುವುದು ಒಳಿತು.

ಇ. ಇತ್ತೀಚಿನ ಪ್ರಕರಣವೊಂದರಲ್ಲಿ, ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಬೇರೆ ಕುಟುಂಬದ ಸದಸ್ಯರ ನಗ್ನ ಚಿತ್ರಗಳನ್ನು ತಮ್ಮ ವೆಬ್ ತಾಣದಲ್ಲಿ ಬಿತ್ತರಿಸುತ್ತಿರುವುದು ಸಾಬೀತಾಗಿ ಕೇರಳದ ಚರ್ಚಿನಲ್ಲಿ ಧರ್ಮೋಪದೇಶ ಮಾಡುತ್ತಿದ್ದ ಪ್ರವಚಕ ಮತ್ತು ಆತನ ಮಗನಿಗೆ ಒಂದು ವರ್ಷ ಸಜೆ ವಿಧಿಸಿ, ಹತ್ತು ಸಾವಿರ ರೂಪಾಯಿಗಳ ದಂಡ ಪಾವತಿಸುವಂತೆ ಆದೇಶಿಸಿರುತ್ತದೆ.

ಸದರಿ ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 43ರಲ್ಲಿ ತಿಳಿಸಿರುವಂತೆ ಕಂಪ್ಯೂಟರ್ ವ್ಯವಸ್ಥೆಗೆ ಹಾನಿಯುಂಟು ಮಾಡಿದಾಗ, ಅದು ಆ ಕಂಪ್ಯೂಟರ್ ಒಡೆಯನ ಅಥವಾ ಅದರ ಪ್ರಭಾರ ಹೊಂದಿರುವ ಯಾರೇ ಆಗಲಿ, ಇತರ ವ್ಯಕ್ತಿಯ ಅನುಮತಿಯಿಲ್ಲದೆ ಮಾಡುವ ಈ ಕೆಳಕಂಡ ಕೃತ್ಯಗಳಿಗೆ ಬಾಧಿತನಾದ ವ್ಯಕ್ತಿಗೆ ಆದ ನಷ್ಟವನ್ನು ಪರಿಹಾರ ರೂಪದಲ್ಲಿ ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು. ಅಲ್ಲದೆ ಕಲಮು 66ರ ಮೇರೆಗೆ ಮೂರು ವರ್ಷಗಳವರೆಗಿನ ಕಾರಾಗೃಹವಾಸದಿಂದ ಅಥವಾ ಎರಡು ಲಕ್ಷ ರೂಪಾಯಿವರೆಗಿನ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಬೇಕಾಗುತ್ತದೆ, ಅವು ಇಂತಿವೆ:

(ಎ) ಅಂಥ ಕಂಪ್ಯೂಟರ್‌ಗೆ, ಅದರ ವ್ಯವಸ್ಥೆಗೆ ಅಥವಾ ಕಂಪ್ಯೂಟರ್ ಜಾಲವನ್ನು ಪ್ರವೇಶಿಸಿದರೆ ಅಥವಾ ಪ್ರವೇಶ ದೊರಕಿಸಿಕೊಂಡರೆ;
(ಬಿ) ತೆಗೆಯಬಹುದಾದ ಯಾವುದೇ ಸಂಗ್ರಹಣಾ ಮಾಧ್ಯಮದಲ್ಲಿ ಇರುವ ಅಥವಾ ಸಂಗ್ರಹಿಸಿರುವ ಮಾಹಿತಿ ಅಥವಾ ದತ್ತಾಂಶವೂ ಒಳಗೊಂಡಂತೆ ಅಂಥ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಿಂದ ಯಾವುದೇ ದತ್ತಾಂಶವನ್ನು (ಡೇಟಾ) ಕಂಪ್ಯೂಟರ್ ದತ್ತಾಂಶ ಸಂಗ್ರಹಣವನ್ನು ಅಥವಾ ಮಾಹಿತಿಯ ಭಾರ ಕುಗ್ಗಿಸಿದರೆ, ಪ್ರತಿ ತೆಗೆದರೆ ಅಥವಾ ಉದ್ಧೃತ ಭಾಗಗಳನ್ನು ತೆಗೆದುಕೊಂಡರೆ;
(ಸಿ) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಲ್ಲಿ ಯಾವುದೇ ಕಂಪ್ಯೂಟರ್ ಕಲ್ಮಶಕಾರಕವನ್ನು ಅಥವಾ ಕಂಪ್ಯೂಟರ್ ವೈರಸನ್ನು ಸೇರಿಸಿದರೆ ಅಥವಾ ಸೇರುವಂತೆ ಮಾಡಿದರೆ;
(ಡಿ) ಯಾವುದೇ ಕಂಪ್ಯೂಟರ್‌ನ್ನು, ಕಂಪ್ಯೂಟರ್ ವ್ಯವಸ್ಥೆಯನ್ನು ಅಥವಾ ಕಂಪ್ಯೂಟರ್ ಜಾಲವನ್ನು, ದತ್ತಾಂಶವನ್ನು, ಕಂಪ್ಯೂಟರ್ ದತ್ತಾಂಶ ಸಂಗ್ರಹವನ್ನು ಅಥವಾ ಅಂಥ ಕಂಪ್ಯೂಟರ್‌ನಲ್ಲಿ, ಕಂಪ್ಯೂಟರ್ ವ್ಯವಸ್ಥೆಯಲ್ಲಿ ಅಥವಾ ಕಂಪ್ಯೂಟರ್ ಜಾಲದಲ್ಲಿರುವ ಯಾವುದೇ ಇತರ ಕಾರ್ಯಸರಣಿಯನ್ನು ಹಾನಿಗೊಳಿಸಿದರೆ ಅಥವಾ ಅದಕ್ಕೆ ಹಾನಿಯಾಗುವಂತೆ ಮಾಡಿದರೆ;
(ಇ) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲವನ್ನು ಭಂಗಗೊಳಿಸಿದರೆ ಅಥವಾ ಭಂಗಗೊಳಿಸುವಂತೆ ಮಾಡಿದರೆ;
(ಎಫ್) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲಕ್ಕೆ ಪ್ರವೇಶ ಪಡೆಯಲು ಅಧಿಕೃತನಾದ ಯಾರೇ ವ್ಯಕ್ತಿಗೆ ಯಾವುದೇ ಉಪಾಯದಿಂದ ಪ್ರವೇಶವನ್ನು ನಿರಾಕರಿಸಿದರೆ ಅಥವಾ ನಿರಾಕರಿಸುವಂತೆ ಮಾಡಿದರೆ;
(ಜಿ) ಈ ಅಧಿನಿಯಮದ ಮೇರೆಗೆ ಮಾಡಲಾದ ನಿಯಮಗಳ ಅಥವಾ ವಿನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿ, ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲಕ್ಕೆ ಯಾರೇ ವ್ಯಕ್ತಿಯು ಪ್ರವೇಶ ಪಡೆಯಲು ಅನುಕೂಲವಾಗುವ ಹಾಗೆ ಅವನಿಗೆ ನೆರವು ನೀಡಿದರೆ;
(ಎಚ್) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಲ್ಲಿ ಹಸ್ತಕ್ಷೇಪ ಮಾಡಿ, ತಿದ್ದಿ ಅಥವಾ ಕೈವಾಡ ತೋರಿಸುವ ಮೂಲಕ ಒಬ್ಬ ವ್ಯಕ್ತಿಯು ಪಡೆದ ಸೇವೆಗಳ ವೆಚ್ಚವನ್ನು ಇನ್ನೊಬ್ಬ ವ್ಯಕ್ತಿಯ ಲೆಕ್ಕಕ್ಕೆ ತೋರಿಸುವಂತೆ ಮಾಡಿದರೆ.

ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 65ರ ಮೇರೆಗೆ ಯಾವುದೇ ಕಂಪ್ಯೂಟರ್‌ನ ಮೂಲ ದಸ್ತಾವೇಜುಗಳನ್ನು ಅಥವಾ ಕಂಪ್ಯೂಟರ್ ಕಾರ್ಯಸರಣಿಯ ಅಥವಾ ಕಂಪ್ಯೂಟರ್‌ನ ಕಾರ್ಯ ವ್ಯವಸ್ಥೆಯ ಅಥವಾ ಕಂಪ್ಯೂಟರ್ ಜಾಲದ ಸಲುವಾಗಿ ಬಳಸುವ ಯಾವುದೇ ಕಂಪ್ಯೂಟರ್‌ನ ಮೂಲ ಸಂಕೇತಗಳು ಅಥವಾ ಆಜ್ಞೆಗಳು ಅಥವಾ ವಿನ್ಯಾಸಗಳು ಮತ್ತು ನಿರ್ದಿಷ್ಟ ರೂಪುರೇಷೆಗಳನ್ನು ಯಾರಾದರೂ ಗೊತ್ತಿದ್ದೂ ಅಥವಾ ಉದ್ದೇಶಪೂರ್ವಕವಾಗಿ ಬಚ್ಚಿಟ್ಟರೆ, ನಾಶಗೊಳಿಸಿದರೆ ಅಥವಾ ವ್ಯತ್ಯಾಸಗೊಳಿಸಿದರೆ, ಅಥವಾ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದೂ ಬಚ್ಚಿಡುವುದಕ್ಕೆ, ನಾಶ ಮಾಡುವುದಕ್ಕೆ ಅಥವಾ ವ್ಯತ್ಯಾಸಗೊಳಿಸುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸಿದರೆ, ಅವನು ಮೂರು ವರ್ಷಗಳವರೆಗಿನ ಕಾರಾವಾಸದಿಂದ ಅಥವಾ ಎರಡು ಲಕ್ಷ ರೂಪಾಯಿವರೆಗಿನ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಬೇಕಾಗುತ್ತದೆ.ಇನ್ನೂ ಮುಂದುವರೆದು ಕಲಮು 66ರಲ್ಲಿ ಹಲವು ಸೈಬರ್ ಅಪರಾಧಗಳನ್ನು ಗುರುತಿಸಿ ಅವುಗಳಿಗೆ ಶಿಕ್ಷೆ ಮತ್ತು ಜುಲ್ಮಾನೆಯ ಪ್ರಮಾಣಗಳನ್ನು ನಿಗದಿಪಡಿಸಿರುತ್ತದೆ, ಈ ಕೆಳಗಿನವುಗಳು ಪ್ರಸ್ತುತದಲ್ಲಿ ಗುರುತಿಸಿರುವ ಅಪರಾಧಗಳು:1. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಗೆ ಅಕ್ರಮ ಸಂದೇಶವನ್ನು ತಲುಪಿಸುವುದು. 2. ಕಳವು ಮಾಡಿರುವ ಕಂಪ್ಯೂಟರ್‌ನ ಮೂಲ ಸಂಪತ್ತನ್ನು ಅಥವಾ ಸಂಪರ್ಕ ಮಾಧ್ಯಮವನ್ನು ತನ್ನ ವಶದಲ್ಲಿ ಹೊಂದಿರುವುದು. ಇದರಿಂದ ಲ್ಯಾಪ್‌ಟಾಪ್ ಕಳವು ಸಹಾ ಸೈಬರ್ ಅಪರಾಧವಾಗಿ ಪರಿಗಣಿಸಲಾಗುತ್ತದೆ. 3. ವೈಯಕ್ತಿಕ ಮಾಹಿತಿಗಳಾದ ವಿದ್ಯುನ್ಮಾನ ದಾಖಲೆಗಳಾದ ಅಂಕಿಚಿಹ್ನೆಯ(ಡಿಜಿಟಲ್ ಸಿಗ್ನೆಚರ್), ಗೌಪ್ಯ ಪದಗಳನ್ನು ಅಥವಾ ಯೂನಿಕ್ ಐಡೆಂಟಿಟಿ ನಂಬರ್‌ಗಳನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸಿ ಕೊಳ್ಳುವುದು.4. ಪರರೂಪಧಾರಣೆಯ ಮೂಲಕ ಕಂಪ್ಯೂಟರ್ ಸಂಪನ್ಮೂಲಗಳಿಂದ ಯಾರೇ ವ್ಯಕ್ತಿಗಳಿಗೆ ಮೋಸ ಮಾಡುವುದು.5. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳ ಗೌಪ್ಯತೆಯನ್ನು ಬಯಲು ಮಾಡುವುದು.6. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಭಯೋತ್ವಾದನೆ ಉಂಟುಮಾಡುವುದು (ಇತ್ತೀಚಿನ ಉಗ್ರಗಾಮಿಗಳ ಭಯೋತ್ವಾದನ ಕೃತ್ಯಗಳ ಬಳಕೆಗೆ ಸೈಬರ್ ಸ್ಪೇಸ್ ಸೂಕ್ತ ತಾಣವಾಗಿರುದನ್ನು ತಡೆಯುವುದೆ ಇದರ ಉದ್ದೇಶ).7. ವಿದ್ಯುನ್ಮಾನ ನಮೂನೆಯಲ್ಲಿ ಅಶ್ಲೀಲವಾದ ಮಾಹಿತಿಯನ್ನು ಪ್ರಕಟಿಸುವುದು.8. ಅಶ್ಲೀಲ ಮಾಹಿತಿಯ ರವಾನೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಮತ್ತು ಭಾಗಿಯಾಗುವುದಕ್ಕೆ ಸಹಕರಿಸುವುದು.ಇಷ್ಟಲ್ಲದೆ ಈ ಅಧಿನಿಯಮದ ಮೇರೆಗೆ ರಚಿಸಲಾದ ಯಾವ ನಿಯಮಗಳ ಅಥವಾ ವಿನಿಮಯಗಳ ಉಲ್ಲಂಘನೆಗಾಗಿ ಪ್ರತ್ಯೇಕವಾಗಿ ಯಾವುದೇ ದಂಡನೆಯನ್ನು ಉಪಬಂಧಿಸಿದಿದ್ದರೆ ಅಂಥ ಯಾವುವೇ ನಿಯಮಗಳನ್ನು ಅಥವಾ ವಿನಿಮಯಗಳನ್ನು ಯಾರಾದರೂ ಉಲ್ಲಂಘಿಸಿದರೆ, ಅವನು ಅಂಥ ಉಲ್ಲಂಘನೆಯಿಂದ ಬಾಧಿತನಾದ ವ್ಯಕ್ತಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ನಷ್ಟ ಪರಿಹಾರವನ್ನು ಸಂದಾಯ ಮಾಡಲು ಅಥವಾ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ದಂಡನೆಗೆ ಗುರಿಯಾಗಲು ಬದ್ಧನಾಗತಕ್ಕದ್ದು.ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳು:
ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಇತರೇ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಕಂಪ್ಯೂಟರ್‌ಗಳ ಬಳಕೆ ಹೆಚ್ಚುತ್ತಿದ್ದು ಇಂದು ಇಂಟರ್‌ನೆಟ್ ಏಕಮಾತ್ರ, ಶ್ರೀಮಂತಿಕೆಯ ಮತ್ತು ಮಾಹಿತಿಗಳ ಸಂಪನ್ಮೂಲಗಳ ಆಧಾರವಾಗಿದ್ದು, ಯಾವುದೇ ಮಾಹಿತಿಗಳನ್ನು ಪಡೆಯಲು ಸಹಕಾರಿಯಾಗಿ ಎಲ್ಲರ ಯೋಚನೆಗೆ ನಿಲುಕುವುದಾಗಿರುತ್ತದೆ. ಅಂತೆಯೇ ಅಪರಾಧಿಗಳಿಗೆ ಸ್ವರ್ಗತಾಣವು ಆಗಿರುತ್ತದೆ ಮತ್ತು ಇದರಿಂದ ಸೃಜಿಸಬಹುದಾದ ಅಪರಾಧಗಳ ಬಗೆಗೆ ತೊಂದರೆಗೀಡಾದ ವ್ಯಕ್ತಿಗಳು ಕೂಡಲೇ ಸಮೀಪದ ಪೋಲಿಸ್ ಠಾಣೆಗೆ ತಮ್ಮ ದೂರು ಅಥವಾ ಫಿರ್ಯಾದು ನೀಡಬೇಕಾಗುತ್ತದೆ. ಪ್ರಸ್ತುತದಲ್ಲಿ ಈ ವಿಷಯವಾಗಿ ನಮ್ಮ ದೇಶದಲ್ಲಿ ಈ ಸೈಬರ್ ಅಪರಾಧಗಳ ಬಗೆಗಿನ ದೂರುಗಳನ್ನು ಸ್ವೀಕರಿಸಲು ಈ ಕೆಳಕಂಡ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಮೇರೆಗಿನ ಮತ್ತು ಇತರೇ ಅಪರಾಧಿಕ ಕಾನೂನುಗಳ ಮೇರೆಗೆ ಕ್ರಮ ಕೈಗೊಳ್ಳಲು ಶಕ್ತವಾಗಿರುತ್ತವೆ, ಅವು ಇಂತಿವೆ:
ವಿಶೇಷ ಸೈಬರ್ ಪೋಲಿಸ್ ಠಾಣೆ : ಈ ಸೈಬರ್ ಕ್ರೈಮ್‌ಗಳಿಗೆ ಸಂಬಧಿಸಿದಂತೆ ಮೀಸಲಾದ ವಿಶೇಷ ಸೈಬರ್ ಪೋಲಿಸ್ ಠಾಣೆಗಳನ್ನು ಬೆಂಗಳೂರು ಸೇರಿದಂತೆ ಮುಂಬೈ ಮತ್ತು ಹೈದರಾಬಾದ್‌ಗಳಲ್ಲಿ ಸ್ಥಾಪಿಸಲಾಗಿದೆ. ಇವುಗಳು ತಮ್ಮ ಪ್ರದೇಶ ವ್ಯಪ್ತಿಯಲ್ಲಿ ಆಗುವ ಯಾವುದೇ ಸೈಬರ್ ಪ್ರಕರಣಗಳ ಕುರಿತಾಗಿ ಅದರಲ್ಲೂ ಭಯೋತ್ವಾದಕ ಇ-ಮೇಲ್‌ಗಳ ಮೇಲೆ ಅಥವಾ ಅಂತರ್ಜಾಲದಲ್ಲಿ ಆಗುವ ಅಪರಾಧಗಳ ಮೇಲೆ ಸ್ವಯಃ ಪ್ರೇರಿತವಾಗಿ ಎಫ್.ಐ.ಆರ್ ದಾಖಲಿಸಿಕೊಳ್ಳುತ್ತವೆ ಮತ್ತು ತನಿಖೆ ನೆಡೆಸಲು ಅಧಿಕಾರ ಪ್ರದತ್ತವಾಗಿರುತ್ತವೆ. ಬೆಂಗಳೂರಿನಲ್ಲಿರುವ ಸೈಬರ್ ಪೋಲಿಸ್ ಠಾಣೆ ಇಡೀ ಕರ್ನಾಟದ ವ್ಯಾಪ್ತಿಯನ್ನು ಹೊಂದಿದ್ದು ಸ್ಥಳೀಯ ಪೋಲಿಸ್ ಠಾಣೆಯ ಸಹಾಯದಿಂದ ಕೆಲಸ ನಿರ್ವಹಿಸುತ್ತಿದೆ.ಪೋಲಿಸ್ ಠಾಣೆ : ಈ ವಿಶೇಷ ಸೈಬರ್ ಪೋಲಿಸ್ ಠಾಣೆಗಳ ವ್ಯಾಪ್ತಿ ಪ್ರದೇಶವನ್ನು ಹೊರತುಪಡಿಸಿದರೆ ಉಳಿದ ಪ್ರದೇಶಗಳಿಗೆ ಆಯಾ ಸ್ಥಳೀಯ ಪೋಲಿಸ್ ಠಾಣೆಗಳ ವ್ಯಾಪ್ತಿಗೆ ಪ್ರಕರಣಗಳನ್ನು ಕುರಿತು ಎಫ್.ಐ.ಆರ್ ದಾಖಲಿಸಿಕೊಳ್ಳುವುದು ಮತ್ತು ತನಿಖೆ ನೆಡೆಸುವ ಅಧಿಕಾರವಿರುತ್ತದೆ.
ಇಂತಹ ದೂರಿನ ಅಥವಾ ಫಿರ್ಯಾದಿನ ಮೇಲೆ ದೋಷಿತ ಕಾರ್ಯಾಚರಣೆ, ಇದರ ಬಗೆಯಿಂದ ನೊಂದಣಿ ಮಾಡಿಕೊಳ್ಳುವುದು, ನೊಂದಣಿಯ ಆಧಾರದ ಮೇಲೆ ವರದಿ ನೀಡುವುದು, ತನಿಖೆ ನೆಡೆಸುವುದು, ಕಾನೂನಿ ಕ್ರಮ ಜರುಗಿಸುವುದು, ನಿರ್ಣಯ ನೀಡುವುದು ಮತ್ತು ನಿರ್ಣಯದ ಮೇರೆಗೆ ನಿರ್ವಹಿಸುವುದು. ಇವುಗಳು ಕಾನೂನಿನ ವ್ಯವಸ್ಥೆಯಲ್ಲಿನ ಘಟ್ಟಗಳು ಮತ್ತು ಪಾಲಿಸಲೇಬೇಕಾದ ನಿಯಮಗಳು. ಇಂತಹ ಕಾನೂನು ಕ್ರಮ ಕೈಗೊಳ್ಳುವ ಮುಂಚೆ ಸೂಕ್ತ ಸಲಹೆಯನ್ನು ನುರಿತ ಕಂಪ್ಯೂಟರ್ ಪರಿಣಿತರನ್ನು ಅಥವಾ ವಕೀಲರನ್ನು ಸಂಪರ್ಕಿಸುವುದು ಒಳಿತು.
ಇತ್ತಿಚೀನವರೆಗೂ, ಸೈಬರ್ ಅಪರಾಧದ ಬಗಗೆ ಆಸಕ್ತಿಯ ಕೊರತೆಯಿಂದ ಮಾಹಿತಿ ತಂತ್ರಜ್ಞಾನದ ವೃತ್ತಿಪರರು ಹಲವು ಪ್ರಕರಣಗಳಲ್ಲಿ ತಾವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೊರತೆ ಎದುರಿಸಬೇಕಾಗಿತ್ತು. ಇತ್ತಿಚೀನ ಅಪರಾಧಗಳಿಗೆ ಇರುವ ಹಳೆಯ ಕಾನೂನುಗಳು ಸೂಕ್ತವಾದವುಗಳಲ್ಲ ಎನ್ನುವ ಅಭಿಪ್ರಾಯ ಒಪ್ಪುವಂತಹದು ಆದರೆ ಹೊಸ ಕಾನೂನುಗಳು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ನಿಜವಾಗಲು ಸಮರ್ಥನೀಯವೇ ಎಂಬ ಪ್ರಶ್ನೆ ಎದುರಿಸುತ್ತಿರುವುದು ಅಕ್ಷರಸಃ ಸತ್ಯ. ಇದರಿಂದಾಗಿಯೇ ಕಾನೂನು ರಚನಾಗಾರರು ಮತ್ತು ಇದನ್ನು ಕಾಪಾಡುವ ಸಂಸ್ಥೆಗಳು ಹಾಗೂ ಕಂಪ್ಯೂಟರ್ ವೃತ್ತಿಪರಾರು ಒಟ್ಟಾಗಿ ಇಂದು ಸೈಬರ್ ಅಪರಾಧಗಳನ್ನು ತಡೆಗಟ್ಟುವಂತಹ ಕೆಲಸ ಕೈಗೊಂಡು ಸಾರ್ವಜನಿಕರಿಗೆ ರಕ್ಷಣಾತ್ಮಕ ಇಂಟರ್‌ನೆಟ್ ಬಳಸಲು ವ್ಯವಸ್ಥೆಗೊಳಿಸಬೇಕಾಗುತ್ತದೆ.
ಸಂಗ್ರಹಿಸಿದ್ದು :
ಮೂಲ : ದಟ್ಸ್ ಕನ್ನಡ
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು